Sunday, April 28, 2024
Homeಜ್ಯೋತಿಷ್ಯಮಂಗಳವಾರದ ರಾಶಿಫಲ: ಯಾವ ರಾಶಿಯವರಿಗೆ ಇಂದು ಮಂಗಳಕರ ದಿನ ?

ಮಂಗಳವಾರದ ರಾಶಿಫಲ: ಯಾವ ರಾಶಿಯವರಿಗೆ ಇಂದು ಮಂಗಳಕರ ದಿನ ?

spot_img
- Advertisement -
- Advertisement -

ಮೇಷ: ಅನಾವಶ್ಯಕವಾಗಿ ಹಣವನ್ನು ದುಂದುವೆಚ್ಚ ಮಾಡಿ ಕೊನೆಗೆ ಪಶ್ಚಾತ್ತಾಪ ಪಡುವಿರಿ. ಯಾರ ಮಾತಿಗೂ ಸೊಪ್ಪು ಹಾಕದೆ ನಿಮ್ಮ ಮನಸ್ಸಿನಂತೆಯೇ ನಡೆಯುವಿರಿ. ಹಿರಿಯರ ಮಾತನ್ನು ಆಲಿಸುವುದು.

ವೃಷಭ: ಒಳಿತು ಕೆಡಕನ್ನು ಸಮಚಿತ್ತದಿಂದ ಸ್ವೀಕರಿಸುವುದು ಒಳಿತು. ಹೃದ್ಗತ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳದಿರಿ ಹಲವನ್ನು ಹಂಬಲಿಸಿ ಏಕಕಾಲದಲ್ಲಿ ಮುನ್ನುಗದಿರಿ. ತಾಳ್ಮೆ ಸಮಾಧಾನ ಇರಲಿ.

ಮಿಥುನ: ವೈಯಕ್ತಿಕ ಸಮಸ್ಯೆಗಳನ್ನು ದಿಟ್ಟ ನಿರ್ಧಾರಗಳಿಂದ ಎದುರಿಸಬೇಕಾಗುತ್ತದೆ. ಮುಂದೂಡಿಕೆಯ ವೈವಾಹಿಕ ಮಾತುಕತೆಗಳು ಪುನಃ ಚಾಲನೆಗೆ ಬರುತ್ತವೆ. ಧಾರ್ಮಿಕ ಕಾರ್ಯಗಳು ಆಸಕ್ತಿಯಿಂದ ನೆರವೇರುತ್ತವೆ.

ಕರ್ಕ: ಮಂಗಲ ಕಾರ್ಯವನ್ನು ನಡೆಸಲು ಇದು ಸಕಾಲ. ವಾಹನ ಖರೀದಿ ಹಾಗೂ ವಿಲೇವಾರಿಯಲ್ಲಿ ಅಪಾರ ಲಾಭ ತಂದೀತು. ಕುಟುಂಬ ವ್ಯವಸ್ಥೆಯನ್ನು ಪುನಃ ರೂಪಿಸುವುದರಿಂದ ಘನತೆ ಹಾಗೂ ನೆಮ್ಮದಿ ಕಂಡು ಬಂದೀತು.

ಸಿಂಹ: ನೌಕರಿಯಲ್ಲಿ ಭಡ್ತಿ ಕುರಿತು ಉನ್ನತಾಧಿಕಾರಿಗಳ ಸಹಕಾರ ಮುನ್ನಡೆಗೆ ಸಾಧಕವಾಗುತ್ತದೆ. ರಾಜಕೀಯ ಧುರೀಣರಿಗೆ ಪ್ರತಿಷ್ಠೆ, ಮನ್ನಣೆ ಸಾಧ್ಯ. ಭಾಗ್ಯದ ಸಂಬಂಧಿತ ಕ್ರಿಯಾಶೀಲ ಸಿದ್ಧಿಗೆ ದೈವಾನುಗ್ರಹವಿದೆ.

ಕನ್ಯಾ: ಸುಖದ ಬಿಂದಿಗೆಯಲ್ಲಿ ಹುಳಿ ಹಿಂಡುವ ಕಾರ್ಯ ಸಾಂಸಾರಿಕವಾಗಿ ಅನುಭವಕ್ಕೆ ಬಂದೀತು. ಅವಿವಾಹಿತರಿಗೆ, ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ನಿರೀಕ್ಷಿತ ಫ‌ಲ ಸಂತಸ ತಂದೀತು.

ತುಲಾ: ಅನೇಕಾನೇಕ ಕಷ್ಟಗಳನ್ನು ಎದುರಿಸುವ ಸಮಯವಿದು. ಗುರು, ರಾಹುಗಳ ಪ್ರತಿಕೂಲತೆ ಆಗಾಗ ಕಂಗೆಡಿಸುವುದು. ತಾಳ್ಮೆ ಸಮಾಧಾನದಿಂದ ವರ್ತಿಸಿರಿ. ವಿರುದ್ಧ ಲಿಂಗಿಗಳಿಂದ ಎಚ್ಚರವಿರಲಿ.

ವೃಶ್ಚಿಕ: ಪ್ರತಿಭಾಶಾಲಿಗಳಾದರೂ ದುರ್ದೈವ ನಿಮ್ಮನ್ನು ಕಾಡಲಿದೆ. ರಾಜಕೀಯ ವರ್ಗದವರು ತಮ್ಮ ಕ್ಷೇತ್ರದಲ್ಲಿ ಕಸರತ್ತುಗಳನ್ನು ತೋರಿಸಬೇಕಾದೀತು. ಸಾಂಸಾರಿಕವಾಗಿ ಧರ್ಮಪತ್ನಿಯ ಸಹಕಾರ ತುಸು ಹಾಯಾಗಿಸಲಿದೆ.

ಧನು: ವೈಯಕ್ತಿಕ ತಪ್ಪುಗಳಿಂದ ಸಮಸ್ಯೆಗಳ ಸುಳಿಯಲ್ಲಿ ಒದ್ದಾಡುವಂತಾದೀತು. ವಿವಾಹಿತರಿಗೆ ಅನಾವಶ್ಯಕ ತಪ್ಪು ಅಭಿಪ್ರಾಯ ಕಲಹಕ್ಕೆ ಕಾರಣವಾಗಲಿದೆ. ಹಣಕಾಸಿನ ವಿಚಾರದಲ್ಲಿ ಧನ ಸಂಗ್ರಹ ಸಮಾಧಾನ ತಂದರೂ ಖರ್ಚು-ವೆಚ್ಚಗಳಲ್ಲಿ ಲೆಕ್ಕಾಚಾರವಿರಬೇಕು.

ಮಕರ: ದೂರ ಸಂಚಾರದ ಬಗ್ಗೆ ಜಾಗ್ರತೆ ಅಗತ್ಯವಿರಬೇಕು. ವಿದ್ಯಾರ್ಥಿಗಳಿಗೆ ತಕ್ಕ ಮಟ್ಟಿನ ಫ‌ಲ ತೋರಿಬರಲಿದೆ. ಮಿತ್ರವರ್ಗದವರ ಸಹಾಯ, ಸಹಕಾರದಿಂದ ನೆಮ್ಮದಿ ತಂದರೂ ಉದಾಸೀನತೆ ಸಲ್ಲದು.

ಕುಂಭ: ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯಾದೀತು. ಮನೆಯಲ್ಲಿ ಮಕ್ಕಳ ಹಾಗೂ ಕುಟುಂಬ ವರ್ಗದವರ ಆಗಮನದಿಂದ ಸಂತಸವಾದೀತು. ಸಣ್ಣಪುಟ್ಟ ಪ್ರಯಾಣವು ಕಂಡುಬಂದೀತು. ಮುನ್ನಡೆ ಇರುತ್ತದೆ.

ಮೀನ: ಮಂಗಲ ಕಾರ್ಯದ ನಿಮಿತ್ತ ಸ್ವಲ್ಪ ಗೊಂದಲಗಳು ಕಂಡು ಬಂದು ತಲೆಕೆಡಲಿದೆ. ಉಳಿದೆಲ್ಲ ವಿಷಯಕ್ಕೆ ತಲೆ ಕೆಡಿಸದಿರಿ. ನೀವು ಲೆಕ್ಕ ಹಾಕಿದ ಹಾಗೆ ಕೆಟ್ಟದು ಆಗಲಾರದು. ಧನಾತ್ಮಕವಾಗಿ ಚಿಂತಿಸಿರಿ. ಉತ್ತಮ ಫ‌ಲಿತಾಂಶವಿದೆ.

- Advertisement -
spot_img

Latest News

error: Content is protected !!