- Advertisement -
- Advertisement -
ಕಾಸರಗೋಡು: ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿರುವ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ದೇವರ ಮೊಸಳೆ ಇದೀಗ ದೇಗುಲದ ಮುಂದೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದೆ. ಬಬಿಯಾ’ ಮೊಸಳೆ ದೇಗುಲದ ಗರ್ಭಗುಡಿಯ ಮುಂದೆ ಬಂದಿದ್ದು,ದೇವಸ್ಥಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೊಸಳೆ ಬಬಿಯಾ ಗರ್ಭಗುಡಿ ಒಳಗೆ ಪ್ರವೇಶಿಸಿರುವುದಾಗಿ ತಿಳಿದುಬಂದಿದೆ.
ಈ ದೇವಸ್ಥಾನ ಕೆರೆಯ ಮಧ್ಯದದಲ್ಲಿದ್ದು, ಮಂಗಳೂರಿನಿಂದ ಸುಮಾರು 45 ಕಿಲೋ ಮೀಟರ್ ದೂರದಲ್ಲಿದೆ ದೇವಸ್ಥಾನದ ಕೆರೆಯಲ್ಲಿ ವಾಸವಾಗಿರುವ ದೇವರ ಮೊಸಳೆ ಎಂದೇ ಭಕ್ತರು ನಂಬಿರುವ ‘ಬಬಿಯಾ’ ಪ್ರತಿದಿನ ದೇವರಿಗಿಟ್ಟ ಅನ್ನ ನೈವೇದ್ಯವನ್ನು ಸೇವಿಸುತ್ತದೆ. ದೇಗುಲದ ಅರ್ಚಕರು ಪೂಜೆಯ ಬಳಿಕ ಬಬಿಯಾ ಎಂದು ಕರೆದಾಗ ಮೊಸಳೆ ಗುಹೆಯಿಂದ ಹೊರ ಬಂದು ಅನ್ನ ಪ್ರಸಾದ ಸೇವಿಸುತ್ತದೆ. ಈ ಮೊಸಳೆ ಬಹಳ ವರ್ಷಗಳಿಂದ ದೇಗುಲದ ಕೆರೆಯಲ್ಲಿದ್ದು, ಅದು ಇಲ್ಲಿಯವರೆಗೆ ಯಾವುದೇ ಜೀವಿಗಳಿಗೆ ಹಾನಿ ಮಾಡಿಲ್ಲ.
- Advertisement -