- Advertisement -
- Advertisement -
ಚಿಕ್ಕಮಗಳೂರು : ಮೊನ್ನೆಯಷ್ಟೇ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದ ಕೃಷ್ಣಮೂರ್ತಿ ಅವರ ತಾಯಿ ಕೊರೊನಾಗೆ ಬಲಿಯಾಗಿದ್ದರು. ಅದರ ಬೆನ್ನಲ್ಲೇ ಅವರ ಸಹೋದರಿ ವಾತ್ಸಲ್ಯ ಕೃಷ್ಣಮೂರ್ತಿ ಕೊರೋನಕ್ಕೆ ಬಲಿಯಾಗಿದ್ದಾರೆ.
ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ತಡರಾತ್ರಿ ಮೃತಪಟ್ಟರು. ಈ ಮೊದಲು ವೇದ ಕೃಷ್ಣಮೂರ್ತಿಯವರ ತಾಯಿ ಸೋಂಕಿನಿಂದ ಮೃತಪಟ್ಟಿದ್ದರು.
ಅವರ ಕುಟುಂಬದಲ್ಲಿ ಕೊರೋನಕ್ಕೆ ಎರಡನೇ ಬಲಿಯಾಗಿದೆ. ಮೃತರನ್ನು ಇಂದು ಕಡೂರಿನ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸುತ್ತಾರೆ ಎಂದು ತಿಳಿದುಬಂದಿದೆ.
- Advertisement -