- Advertisement -
- Advertisement -
ಕೋಲಾರ ಜೆಡಿಎಸ್ ಉಚ್ಛಾಟಿತ ಶಾಸಕರಾಗಿರುವ ಶ್ರೀನಿವಾಸ ಗೌಡ ವಿರುದ್ಧ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ 2019 ರಲ್ಲಿ ಮಾನನಷ್ಟ ಪ್ರಕರಣ ದಾಖಲು ಮಾಡಿದ್ದರು.
ಬಿಜೆಪಿ ಎಸ್.ಆರ್. ವಿಶ್ವನಾಥ್ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದ ಆರೋಪದಡಿ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. 2019 ರಲ್ಲಿ ಬಿಜೆಪಿ ಸರ್ಕಾರ ರಚನೆ ವೇಳೆ ಕೋಟ್ಯಾಂತರ ರೂಪಾಯಿ ನನ್ನ ಮನೆ ಬಾಗಿಲಿಗೆ ತಂದಿದ್ದರು ಅಂತಾ ಶಾಸಕ ಶ್ರೀನಿವಾಸ ಗೌಡ ಹೇಳಿಕೆ ನೀಡಿದ್ದರು.
ಈ ಹೇಳಿಕೆ ವಿರುದ್ಧ ಶಾಸಕ ವಿಶ್ವನಾಥ್ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸಿಟಿ ಸಿವಿಲ್ ಕೋರ್ಟ್ ಒಂದು ರೂಪಾಯಿ
ದಂಡ ಕಟ್ಟಲು ಆದೇಶ ನೀಡಿದೆ.
- Advertisement -