- Advertisement -
- Advertisement -
ಕಾಸರಗೋಡು: ಪಡಿತರ ಚೀಟಿಯಲ್ಲಿ ಉಂಟಾದ ಲೋಪದೋಷಗಳ ತಿದ್ದುಪಡಿ ಮಾಡಲು ಮತ್ತು ನೂತನ ಮಾಹಿತಿ ಸೇರಿಸಲು ಹೊಸದಾಗಿ ಸಿದ್ಧಗೊಂಡಿದೆ “ತೆಳಿಮ ಯೋಜನೆ” ಈ ಯೋಜನೆಗೆ ಚಾಲನೆ ನೀಡಲಾಯಿತು.
2017 ರ ಪಡಿತರ ಚೀಟಿ ನವೀಕರಣ ಕುರಿತು ರೇಶನ್ಕಾರ್ಡ್ ಮೆನೇಜ್ಮೆಂಟ್ ಸಿಸ್ಟಂನಲ್ಲಿ ಬಂದಿರುವ ಲೋಪ ದೋಷ ಗಳನ್ನು ತಿದ್ದುಪಡಿ ನಡೆಸುವ ನಿಟ್ಟಿನಲ್ಲಿ ಈ “ತೆಳಿಮ ಯೋಜನೆ” ಆರಂಭಿಸಿದ್ದೇವೆ ಎಂದು ನಾಗರಿಕ ಪೂರೈಕೆ ಸಚಿವ ಜಿ.ಆರ್ ಅನಿಲ್ ಹೇಳಿದರು.
ಸದಸ್ಯರ ಹೆಸರು, ವಿಳಾಸ, ವಯಸ್ಸು, ಕಾರ್ಡ್ ಮಾಲಕರ ಜೊತೆಗಿನ ಸಂಬಂಧ, ಲೋಪದೋಷ, ಇತರ ಬದಲಾವಣೆ, ನೂತನ ಮಾಹಿತಿಗಳ ಸೇರ್ಪಡೆ ಮಾಡಬಹುದು. ಈ ಯೋಜನೆಯ ಅಂಗವಾಗಿ ಡಿ.15 ರ ವರೆಗೆ ಶಿಬಿರವನ್ನು ಏರ್ಪಡಿಸಲಾಗಿದೆ.
- Advertisement -