Wednesday, April 16, 2025
Homeಮಹಾನ್ಯೂಸ್ಸಂಸದ ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಮಹಾರಾಷ್ಟ್ರ ಡಿಸಿಎಂರನ್ನು ಭೇಟಿಯಾಗಿದ್ದಕ್ಕೆ ಸಿಕ್ತು ಗುಡ್ ನ್ಯೂಸ್;...

ಸಂಸದ ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಮಹಾರಾಷ್ಟ್ರ ಡಿಸಿಎಂರನ್ನು ಭೇಟಿಯಾಗಿದ್ದಕ್ಕೆ ಸಿಕ್ತು ಗುಡ್ ನ್ಯೂಸ್; 2 ತಿಂಗಳಿಂದ ಬಂದ್ ಆಗಿದ್ದ ಕರಾವಳಿಗರ ಹೋಟೆಲ್ ಉದ್ಯಮ ರಿ ಸ್ಟಾರ್ಟ್ ; ಮಹಾ ಬಿಜೆಪಿ ನಾಯಕರ ಪ್ರಯತ್ನಕ್ಕೆ ಸಿಕ್ತು ಫಲ

spot_img
- Advertisement -
- Advertisement -

ಮುಂಬೈ; ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಮಾಜಿ ಸಂಸದ ನಳಿನ್ ಮಹಾರಾಷ್ಟ್ರ ಡಿಸಿಎಂರನ್ನು ಭೇಟಿಯಾಗಿದ್ದಕ್ಕೆ ಕೊನೆಗೂ  ಗುಡ್ ನ್ಯೂಸ್ ಸಿಕ್ಕಿದೆ. 2 ತಿಂಗಳಿಂದ ಬಂದ್ ಆಗಿದ್ದ ಕರಾವಳಿಗಳ ಹೋಟೆಲ್ ಉದ್ಯಮ ಇದೀಗ ರಿ ಸ್ಟಾರ್ಟ್ ಆಗಿದ್ದು  ಮಹಾ ಬಿಜೆಪಿ ನಾಯಕರ ಪ್ರಯತ್ನಕ್ಕೆ ಬಹುದೊಡ್ಡ ಫಲ ಸಿಕ್ಕಿದೆ.

ಪುಣೆಯಲ್ಲಿ ಅಪ್ರಾಪ್ತನೊಬ್ಬ ಮದ್ಯ ಸೇವಿಸಿ ಕಾರು ಚಲಾಯಿಸಿದ ಪರಿಣಾಮ  ಕಾರು ಡಿಕ್ಕಿಯಾಹಿ ಇಬ್ಬರು ಮೃತಪಟ್ಟಿದ್ದರು. ಇದರಿಂದಾಗಿ ಪುಣೆಯ ಬಹುತೇಕ ಹೋಟೆಲ್ ಮತ್ತು ಬಾರ್ ಗಳ ಪರವಾನಗಿಯನ್ನು ಅಲ್ಲಿನ ಜಿಲ್ಲಾಧಿಕಾರಿಗಳು ರದ್ದುಗೊಳಿಸಿದ್ದರು. ಇದರಿಂದ ಕರ್ನಾಟಕ ಭಾಗದ ಅದರಲ್ಲೂ ತುಳುನಾಡಿನ 35ಕ್ಕೂ ಅಧಿಕ ಹೋಟೆಲ್ ಬಾರ್ ಉದ್ಯಮ ಸಂಕಷ್ಟಕ್ಕೆ ಈಡಾಗಿತ್ತು.  ಬರೋಬ್ಬರಿ ಎರಡು ತಿಂಗಳುಗಳ ಕಾಲ ಉದ್ಯಮ ಬಂದ್ ಆಗಿ ಹೋಟೆಲ್ ಮಾಲೀಕರು, ಕಾರ್ಮಿಕರು ಕಷ್ಟಕ್ಕೆ ಸಿಲುಕಿದ್ದರು.

ಹೀಗಾಗಿ ಮಹಾರಾಷ್ಟ್ರದ ಮೀರಾ ಬೈಂದರ್ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು ಹಾಗೂ ಉದ್ಯಮಿ ಸಚ್ಚಿದಾನಂದ ಶೆಟ್ಟಿಯವರ ಸಂಘಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಸಂಸದರು ಹಾಗೂ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನದಲ್ಲಿ ಮಂಗಳೂರು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ‌ ಮುಂಬೈನ ಮಾಜಿ ಸಂಸದ ಗೋಪಾಲ ಶೆಟ್ಟಿಯವರ ಮುಂದಾಳತ್ವದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಯಿತು.

ನಳಿನ್ ಕುಮಾರ್ ಕಟೀಲ್ ರವರ ಜೊತೆಗೆ ಆತ್ಮೀಯ ಸಂಬಂಧ ಹೊಂದಿದ್ದ ಮಹಾ ಡಿಸಿಎಂ ಫಡ್ನವಿಸ್ ಬಳಿ ಮನವಿ ಮಾಡಲಾಗಿತ್ತು. ಈ ಮನವಿಗೆ ಒಂದೇ ದಿನದಲ್ಲಿ ಫಲ ಸಿಕ್ಕಿದೆ. ಭೇಟಿ ಬಳಿಕ ಕೂಡಲೇ ಸಭೆ ನಡೆಸಿ ಜಿಲ್ಲಾಧಿಕಾರಿಗಳ ಬಳಿ ಮಾತುಕತೆ ನಡೆಸಿದ ಉಪಮುಖ್ಯಮಂತ್ರಿ ಫಡ್ನವಿಸ್ ಬಂದ್ ಆಗಿದ್ದ ಎಲ್ಲಾ ಬಾರ್ ಗಳನ್ನು ಮರು ಆರಂಭಿಸುವಂತೆ ಸೂಚನೆ ನೀಡಿದ್ದಾರೆ. ಉಪಮುಖ್ಯಮಂತ್ರಿಗಳ ಸೂಚನೆಯ ಬೆನ್ನಲ್ಲೇ 35ಕ್ಕೂ ಅಧಿಕ ಹೋಟೆಲ್ ಮತ್ತು ಬಾರ್ ಉದ್ಯಮಗಳು ಮತ್ತೆ ಆರಂಭವಾಗಿದೆ.

ಹಾಗಾಗಿ ನಳಿನ್ ಕುಮಾರ್ ಕಟೀಲು, ಬ್ರಿಜೇಶ್ ಚೌಟ ಹಾಗೂ ಮಹಾರಾಷ್ಟ್ರದ ಮಾಜಿ ಎಂಪಿ ಗೋಪಾಲ್ ಶೆಟ್ಟಿ ಮತ್ತು ಇತರರಿಗೆ ಅಲ್ಲಿನ ಹೋಟೆಲ್ ಅಸೋಸಿಯೇಷನ್ ಮುಖ್ಯಸ್ಥರಾದ ಗಣೇಶ ಶೆಟ್ಟಿ ಅವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.

- Advertisement -
spot_img

Latest News

error: Content is protected !!