Wednesday, May 22, 2024
Homeತಾಜಾ ಸುದ್ದಿರಾಜ್ಯದಲ್ಲಿ ಇನ್ಮುಂದೆ ಎಲ್ಲೂ ಕೂಡ ಲಾಕ್​ಡೌನ್​ ಇರಲ್ಲ: ಸಿಎಂ ಬಿಎಸ್​ವೈ

ರಾಜ್ಯದಲ್ಲಿ ಇನ್ಮುಂದೆ ಎಲ್ಲೂ ಕೂಡ ಲಾಕ್​ಡೌನ್​ ಇರಲ್ಲ: ಸಿಎಂ ಬಿಎಸ್​ವೈ

spot_img
- Advertisement -
- Advertisement -

ಬೆಂಗಳೂರು: ರಾಜ್ಯದ ಜನತೆಯನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯದಲ್ಲಿ ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಹಾಗೂ ರಾಜ್ಯದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುವುದೇನೆಂದರೆ, ಇದನ್ನು ತೊಲಗಿಸಲು ಲಾಕ್​ಡೌನ್​ ಒಂದೇ ಪರಿಹಾರವಲ್ಲ. ಜನರು ಕೋವಿಡ್​ ತೊಲಗಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಈಗಾಗಲೇ ನಾನು ಎಲ್ಲಾ ಶಾಸಕರು, ಸಚಿವರು, ನರ್ಸ್ ಗಳು, ಡಾಕ್ಟರ್, ಆಶಾ ಕಾರ್ಯಕರ್ತೆಯರು ಪ್ರಾಣದ ಹಂಗು ತೊರೆದು ತಮ್ಮ ಪ್ರಾಣನ್ನೇ ಮುಡುಪಾಗಿಟ್ಟು ಕೊರೋನಾ ತಡೆಯಲು ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಉಳಿದು ಬದುಕಬೇಕು ಅಂದ್ರೆ.. ಕೋವಿಡ್ ನಿಂದ ದೂರ ಇರಬೇಕಾದ್ರೇ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.

ಕೊರೋನಾ ಸಲಕರಣೆ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ

ಪ್ರತಿಪಕ್ಷಗಳು ಕೊರೋನಾ ಸಲಕರಣೆ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬುದಾಗಿ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಆದಿಯಾಗಿ ಯಾರೊಬ್ಬ ನಾಯಕರು ಕೇಳಿದ್ರೂ ಯಾವುದೇ ದಾಖಲೆ ಕೊಡಲು ನಾವು ಸಿದ್ದ. ನಮ್ಮ ಅಧಿಕಾರಿಗಳು ಕೇಳುವ ದಾಖಲೆ ನೀಡಲಿದ್ದಾರೆ. ಕೊರೋನಾ ಸಲಕರಣೆ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪಷ್ಟ ಪಡಿಸಿದರು.

ನೇರ ಪ್ರಸಾರ

ನೇರ ಪ್ರಸಾರ.

Posted by BS Yediyurappa on Tuesday, 21 July 2020

- Advertisement -
spot_img

Latest News

error: Content is protected !!