- Advertisement -
- Advertisement -
ಬೈಂದೂರು: ಸಿಎಂ ಬೊಮ್ಮಾಯಿ ಆಗಮಿಸಿದ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದ ವೇಳೆ ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡ ಘಟನೆ ಬೈಂದೂರಿನ ಅರೆಶಿರೂರು ಬಳಿ ನಡೆದಿದೆ.
ಕೊಲ್ಲೂರಿಗೆ ಆಗಮಿಸಲು ಪತ್ನಿಯೊಂದಿಗೆ ಬಂದ ಬೊಮ್ಮಾಯಿ ಹೆಲಿಪ್ಯಾಡ್ನಲ್ಲಿ ಬಂದಿಳಿದ ವೇಳೆ ಈ ಘಟನೆ ಸಂಭವಿಸಿದೆ. ಮುಖ್ಯಮಂತ್ರಿಗಳ ಎಸ್ಕಾರ್ಟ್ ಹೋದ ಬಳಿಕ ಬೆಂಕಿ ಕಾಣಿಸಿಕೊಂಡಿದೆ. ಇದ್ರಿಂದ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದ್ರೆ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
- Advertisement -