ಬಂಟ್ವಾಳ: ಬಂಟ್ವಾಳ ಕ್ಷೇತ್ರದಲ್ಲಿ ಧರ್ಮಯುದ್ಧದ ರಣಕಹಳೆ ಊದಿ ಆಗಿದೆ, ಕಾರ್ಯಕರ್ತರು ಸತ್ಯ, ನ್ಯಾಯ,ಧರ್ಮ ಸಮೃದ್ಧಿಯ ಗೆಲುವು ಪಡೆಯಲು ಬಂಟ್ವಾಳದಲ್ಲಿ ಬಿಜೆಪಿ ಗೆಲ್ಲಿಸಿ, ಆ ಮೂಲಕ ಕ್ಷೇತ್ರದ ಪ್ರತಿಯೊಬ್ಬ ಕಾರ್ಯಕರ್ತರು ಗೆಲುವು ಸಾಧಿಸದಂತೆ ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಅವರು ಕಳ್ಳಿಗೆ ಶಕ್ತಿ ಕೇಂದ್ರದ ಜಾರಂದಗುಡ್ಡೆ ದೇವಿಪ್ರಸಾದ್ ಅವರ ಮನೆಯಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಪಕ್ಷ ಸಂಘಟನೆಯ ಜೊತೆ ಅಧಿಕಾರ ಸಿಕ್ಕಿದಾಗ ಮಾತ್ರ ಕಾರ್ಯಕರ್ತರಿಗೆ ಬೆಲೆ ಬರುತ್ತದೆ. ಬಿಜೆಪಿ ಯಾವ ಉದ್ದೇಶದಿಂದ ಉದಯವಾಯಿತು ಎಂಬ ವಿಚಾರ ನಮಗೆ ತಿಳಿದಿದೆ.
ಅಭಿವೃದ್ಧಿ ಜೊತೆಗೆ ದೇಶದ ಸಂಸ್ಕೃತಿ, ಧರ್ಮ ಉಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಶಾಶ್ವತ ಯೋಜನೆಗಳು, ಮಹಿಳೆಯರ ಪರವಾದ ಯೋಜನೆಗಳು,ಮಕ್ಕಳಿಂದ ಹಿಡಿದು ಹಿರಿಯರವರೆಗಿನ ನೂರಾರು ಯೋಜನೆಗಳು,ಕೃಷಿ, ಆರೋಗ್ಯ, ಶಿಕ್ಷಣ ಹೀಗೆ ಸರ್ವ ಜನಾಂಗದ ಅಭಿವೃದ್ಧಿಗಾಗಿ ಜಾರಿಯಾದ ಯೋಜನೆಗಳ ಬಗ್ಗೆ ಸಮಗ್ರವಾಗಿ ಗ್ರಾಮಗ್ರಾಮಗಳಿಗೆ ತೆರಳಿ ಮತದಾರರಿಗೆ ತಿಳಿಸುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದರು.
ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮಾದವ ಮಾವೆ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಯುವ ಮೋರ್ಚಾದ ಅಧ್ಯಕ್ಷ ಕಿಶೋರ್ ಪಲ್ಲಿಪಾಡಿ, ಅಮ್ಟಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬೆಳ್ಳೂರು, ಕಾನೂನು ಪ್ರಕೋಷ್ಟದ ಸಂಚಾಲಕ ಶ್ರೀಧರ್ ಶೆಟ್ಟಿ ಪುಳಿಂಚ, ಶಕ್ತಿ ಕೇಂದ್ರ ದ ಸಂಚಾಲಕ ಮನೋಜ್ ವಳವೂರು, ಬೂತ್ ಅಧ್ಯಕ್ಷರುಗಳಾದ ಯೋಗಿಶ್ ದರಿಬಾಗಿಲು, ಪುರುಷೋತ್ತಮ ಕೊಟ್ಟಾರಿ, ಗಿರೀಶ್ ಜಾರಂದಗುಡ್ಡೆ, ಗ್ರಾಮಪಂಚಾಯತ್ ಅಧ್ಯಕ್ಷೆ ಯಶೋಧ ಜಾರಂದಗುಡ್ಡೆ, ಉಪಾಧ್ಯಕ್ಷ ದಾಮೋದರ ನೆತ್ತರಕೆರೆ,ಸದಸ್ಯರಾದ ವಾರಿಜ ಚಂದ್ರಿಗೆ,ರೇಷ್ಮಾ ಬೆಂಜನಪದವು ಮತ್ತಿತರರು ಉಪಸ್ಥಿತರಿದ್ದರು.