- Advertisement -
- Advertisement -
ಕೊಡಗು: ಇಲ್ಲಿನ ತಲಕಾವೇರಿಯಲ್ಲಿ ಇತ್ತೀಚಿಗೆ ನಡೆದ ದುರಂತದಲ್ಲಿ ಬೆಟ್ಟ ಕುಸಿತದಿಂದಾಗಿ ಮೃತಪಟ್ಟಿದ್ದ ಅರ್ಚಕ ನಾರಾಯಣಾಚಾರ್ ಅವರ ಪರಿವಾರಕ್ಕೆ ಸರ್ಕಾರ ಪರಿಹಾರ ಘೋಷಿಸಿತ್ತು.ಈ ಸಂದರ್ಭದಲ್ಲಿ ವಿದೇಶದಲ್ಲಿದ್ದ ಅವರ ಪುತ್ರಿಯರು ಭಾರತಕ್ಕೆ ಆಗಮಿಸಿ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಿದ್ದರು.
ಪರಿಹಾರ ಹಣವನ್ನು ಅವರ ಪುತ್ರಿಯರಾದ ಶಾರದಾ ಆಚಾರ್ ಹಾಗೂ ನಮಿತಾ ಆಚಾರ್ ಹೆಸರಿನಲ್ಲಿ ಚೆಕ್ ನೀಡಲಾಗಿತ್ತು.ಆದರೆ ಮತಾಂತರಗೊಂಡಿದ್ದ ಈ ಇಬ್ಬರೂ ತಮ್ಮ ಹೆಸರುಗಳನ್ನು ಕ್ರಮವಾಗಿ ಶನೋನ್ ಫರ್ನಾಂಡೀಸ್ ಹಾಗೂ ನಮಿತ ನಝರತ್ ಎಂದು ಬದಲಾಯಿಸಿಕೊಂಡಿದ್ದು,ತಮಗೆ ಬದಲಾದ ಹೆಸರಿನಲ್ಲಿ ಚೆಕ್ ನೀಡುವಂತೆ ನಾರಾಯಣಾಚಾರ್ಯ ಪುತ್ರಿಯರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.ಇದಕ್ಕೆ ಈಗ ಜಿಲ್ಲಾಡಳಿತ ಸಮ್ಮತಿಸಿದೆ ಎಂದು ತಿಳಿದು ಬಂದಿದೆ.
- Advertisement -