Saturday, April 27, 2024
Homeತಾಜಾ ಸುದ್ದಿಬೆಂಗಳೂರು;ರಾಜಭವನದಲ್ಲಿ ಪ್ರಧಾನಿ ಮೋದಿಯಿಂದ ನಿನ್ನೆ ರಾತ್ರಿ ಔತಣ ಕೂಟ; ನಟ ಯಶ್, ರಿಷಭ್ ಶೆಟ್ಟಿ ಸೇರಿದಂತೆ...

ಬೆಂಗಳೂರು;ರಾಜಭವನದಲ್ಲಿ ಪ್ರಧಾನಿ ಮೋದಿಯಿಂದ ನಿನ್ನೆ ರಾತ್ರಿ ಔತಣ ಕೂಟ; ನಟ ಯಶ್, ರಿಷಭ್ ಶೆಟ್ಟಿ ಸೇರಿದಂತೆ ಅನೇಕರು ಭಾಗಿ

spot_img
- Advertisement -
- Advertisement -

ಬೆಂಗಳೂರು; ಇಂದು ಸಿಲಿಕಾನ್ ಸಿಟಿಯಲ್ಲಿ ಏಷ್ಯಾದ ಅತೀ ದೊಡ್ಡ ಏರ್ ಶೋ ವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆ ನಿನ್ನೆಯೇ ನಮೋ ಬೆಂಗಳೂರಿಗೆ ಆಗಮಿಸಿದ್ದಾರೆ.

ಇನ್ನು ನಿನ್ನೆ ರಾತ್ರಿ ಸಿನಿಮಾ ತಾರೆಯರಿಗೆ, ಕ್ರಿಕೆಟಿಗರಿಗೆ, ಉದ್ಯಮಿಗಳು ಸೇರಿದಂತೆ ಅನೇಕ ಗಣ್ಯರಿಗೆ ರಾಜಭವನದಲ್ಲಿ ಔತಣ ಕೂಟ ಏರ್ಪಡಿಸಿದ್ದರು. ಈ ಔತಣಕೂಟದಲ್ಲಿ ನಟ ರಿಷಭ್ ಶೆಟ್ಟಿ, ಯಶ್, ಅಶ್ವಿನಿ ಪುನೀತ್ ರಾಜ್​ಕುಮಾರ್ , ನಿರ್ಮಾಪಕ ವಿಜಯ್ ಕಿರಂಗದೂರು ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ ಎನ್ನಲಾಗಿದೆ.

ರಾಜಭವನದ ಹೊರ ಭಾಗದಲ್ಲಿ ಯಶ್ ಹಾಗೂ ರಿಷಬ್ ಶೆಟ್ಟಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ. ಅಭಿಮಾನಿಗಳ ಜತೆ ಅವರು ಪೋಸ್ ನೀಡಿದ್ದಾರೆ.

- Advertisement -
spot_img

Latest News

error: Content is protected !!