Friday, June 5, 2026
Homeಕರಾವಳಿಉಡುಪಿಬೈಂದೂರು: ಗಾಂಜಾ ಸೇವನೆ ಪ್ರಕರಣ: ಮತ್ತೆ ಏಳು ಮಂದಿ ಬಂಧನ

ಬೈಂದೂರು: ಗಾಂಜಾ ಸೇವನೆ ಪ್ರಕರಣ: ಮತ್ತೆ ಏಳು ಮಂದಿ ಬಂಧನ

- Advertisement -
- Advertisement -

ಬೈಂದೂರು: ಗಾಂಜಾ ಸೇವನೆ ವಿರುದ್ಧ ಕಾರ್ಯಾಚರಣೆ ಮುಂದುವರೆಸಿದ ಪೊಲೀಸರು ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು ಕರಾವಳಿ ಸಮುದ್ರ ಕಿನಾರೆ ಬಳಿ ಶರತ್ ಪೂಜಾರಿ (20), ಪಡುವರಿ ಗ್ರಾಮದ ಸೋಮೇಶ್ವರ ಬೀಚ್ ಬಳಿ ವಿಧ್ಯಾಧರ (19), ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಗ್ಲೆಗುಡ್ಡೆ ಪರನೀರು ಮೈದಾನದ ಬಳಿ ಮಹಮದ್ ರಫೀಕ್(36), ಆ.27ರಂದು ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಾಸಿ ಪ್ರವಾಸಿ ಮಂದಿರದ ಬಳಿ ಮುಹಮ್ಮದ್ ರಿಹಾಬ್ ಸಾದಾ, ಮುಹಮ್ಮದ್ ದಾನಿಶ್, ಮುಹಮ್ಮದ್ ಅರ್ಬಾರ್, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಾಡಿ ಗ್ರಾಮದ ಮುಳ್ಳುಗುಡ್ಡೆ ಎಂಬಲ್ಲಿ ರಾಘವೇಂದ್ರ ಆಚಾರ್ಯ (30) ಎಂಬವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!