- Advertisement -
- Advertisement -
ಚಿಕ್ಕಮಗಳೂರು; ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು ಆತ್ಮೀಯ ನನ್ನ ಚಿಕ್ಕಮಗಳೂರಿನ ಮತದಾರ ಬಂಧುಗಳೆ ಕಳೆದ 20 ವರ್ಷದಿಂದ ನನ್ನನ್ನು ಆಯ್ಕೆ ಮಾಡಿ ಗೆಲ್ಲಿಸಿದ್ದಾಕ್ಕಾಗಿ ನಿಮಗೆ ಚಿರಋಣಿ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ ಅದರಂತೆ ಸಮಚಿತ್ತದಿಂದ ಸೋಲನ್ನು ಸ್ವೀಕರಿಸಿದ್ದೇನೆ. ಕಾರ್ಯಕರ್ತರು ದೃತಿಗೆಡದೆ ಮತ್ತೊಮ್ಮೆ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಶ್ರಮಿಸೋಣ. ಎಲ್ಲರಿಗೂ ಧನ್ಯವಾದಗಳು.ನಿಮ್ಮವ ಸಿಟಿ ರವಿ ಎಂದು ಹೇಳಿದ್ದಾರೆ.
- Advertisement -