- Advertisement -
- Advertisement -
ಉಡುಪಿಯಲ್ಲಿ ಕರ್ಕಶ ಹಾರ್ನ್ ಬಳಸಿ ಶಬ್ದಮಾಲಿನ್ಯ ಉಂಟು ಮಾಡುತಿದ್ದ ಬಸ್ ಗಳ ವಿರುದ್ಧ ಇಂದು ಉಡುಪಿ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಉಡುಪಿ ಟ್ರಾಪಿಕ್ ಎಸ್ ಐ ಅಬ್ದುಲ್ ಖಾದರ್ ನೇತ್ರತ್ವದಲ್ಲಿ ನಗರದ ತಾಲ್ಲೂಕು ಆಫೀಸ್ ಬಳಿ ಕಾರ್ಯಾಚರಣೆ ನಡೆಸಿದ್ದು , ಮಂಗಳೂರು ಉಡುಪಿ ನಡುವೆ ಸಂಚರಿಸುವ 40 ಕ್ಕೂ ಹೆಚ್ಚು ಎಕ್ಸ್ ಪ್ರೆಸ್ , ಸರ್ವಿಸ್ ಬಸ್ ಗಳನ್ನು ತಪಾಸಣೆ ಮಾಡಿದರು .
ಈ ವೇಳೆ ಬಸ್ಸಿನ ಚಾಲಕ , ನಿರ್ವಾಹಕರ ಕೈಯಿಂದಲೇ ಹಾರ್ನ್ ಗಳನ್ನು ತೆಗೆಸಿದ ಉಡುಪಿ ಟ್ರಾಫಿಕ್ ಠಾಣಾ ಪೋಲಿಸರು 25 ಕರ್ಕಶ ಹಾರ್ನ್ ಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ.
- Advertisement -