Friday, May 17, 2024
Homeತಾಜಾ ಸುದ್ದಿದೇಶದ್ರೋಹಿ ಎಂಬ ಪಟ್ಟ ಪಡೆದ ಬಿರಿಯಾನಿ: ಅಷ್ಟಕ್ಕೂ ಬಿರಿಯಾನಿ ಮಾಡಿದ ತಪ್ಪಾದರೂ ಏನು?

ದೇಶದ್ರೋಹಿ ಎಂಬ ಪಟ್ಟ ಪಡೆದ ಬಿರಿಯಾನಿ: ಅಷ್ಟಕ್ಕೂ ಬಿರಿಯಾನಿ ಮಾಡಿದ ತಪ್ಪಾದರೂ ಏನು?

spot_img
- Advertisement -
- Advertisement -

ನವದೆಹಲಿ: ಬಿರಿಯಾನಿ ಅಂದಾಕ್ಷಣ ಮಾಂಸಾಹಾರಿಗಳ ಬಾಯಲ್ಲಿ ತನ್ನಿಂದ ತಾನೇ ನೀರು ಬರುತ್ತೆ. ಬಿರಿಯಾನಿಗಿರುವ ಪವರೇ ಅಂತಹದ್ದು. ಹೀಗಿರುವಾಗ ಬಿರಿಯಾನಿ ಇದೀಗ ದೇಶದ್ರೋಹಿ ಅನ್ನೋ ಕುಖ್ಯಾತಿಯನ್ನು ಪಡೆದುಕೊಂಡಿದೆ.

ಅಷ್ಟಕ್ಕೂ ಬಿರಿಯಾನಿಗೆ ಈ ರೀತಿ ಅಪಕೀರ್ತಿ ಬರೋದಕ್ಕೆ ಕಾರಣ ಏನ್ ಗೊತ್ತಾ? ದೆಹಲಿಯ ಶಾಹೀನ್​ ಬಾಗ್​ ಪ್ರದೇಶದಲ್ಲಿ ಸಿಎಎ ವಿರೋಧಿಸಿ ವಾರಗಳ ಕಾಲ ಪ್ರತಿಭಟನೆಗಳು ನಡೆದಿದ್ದವು. ಬಳಿಕ ಈ ಪ್ರತಿಭಟನೆಯನ್ನ ಅಪಖ್ಯಾತಿಗೊಳಿಸಬೇಕು ಅಂತಾ ಬಿರಿಯಾನಿಯನ್ನ ಅಸ್ತ್ರವನ್ನಾಗಿ ಬಳಕೆ ಮಾಡಲಾಯ್ತು. ಈ ಘಟನೆ ನಡೆದು ಇದೀಗ ವರ್ಷಗಳೇ ಕಳೆದಿದೆ. ಆದರೆ ಬಿರಿಯಾನಿ ಮಾತ್ರ ದೇಶ ವಿರೋಧಿ ತಿನಿಸು ಎಂಬ ಅಪಖ್ಯಾತಿಯನ್ನ ಗಳಿಸಿಬಿಟ್ಟಿದೆ.

ಸೆಪ್ಟೆಂಬರ್​ ತಿಂಗಳಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್​​ ದೆಹಲಿ ಸಿಎಂ ಕೇಜ್ರಿವಾಲ್​ ವಿರುದ್ಧ ಮಾತನಾಡುವ ಭರದಲ್ಲಿ, ಶಾಹೀನಾಭಾಗ್​ ಪ್ರತಿಭಟನಾಕಾರರಿಗೆ ಕೇಜ್ರಿವಾಲ್​ ಬಿರಿಯಾನಿ ನೀಡಿದ್ದರು ಎಂದಿದ್ದಾರೆ.

ಈ ಬಾರಿ ಕೃಷಿ ಮಸೂದೆ ವಿರೋಧಿಸಿ ಪಂಜಾಬ್​ ಹಾಗೂ ಹರಿಯಾಣದ ರೈತರು ದೆಹಲಿ ಗಡಿಯಲ್ಲಿ ರೈತರು ಬೀಡು ಬಿಟ್ಟಿದ್ದಾರೆ. ಈ ಪ್ರತಿಭಟನೆಯಲ್ಲೂ ಬಿರಿಯಾನಿ ಕಾಣಿಸಿಕೊಂಡಿದ್ದು ಮತ್ತೊಮ್ಮೆ ದೇಶದ್ರೋಹಿ ಪಟ್ಟ ಅಲಂಕರಿಸಿಕೊಂಡಿದೆ. ಪ್ರತಿಭಟನೆ ವಿರೋಧಿಗಳು ಇದನ್ನ ಮತ್ತೊಂದು ಶಹೀನ್​ ಬಾಗ್​ ಪ್ರೊಟೆಸ್ಟ್ ಎಂದು ಕರೆದ್ರೆ ಇನ್ನೂ ಹಲವರು ಪ್ರತಿಭಟನೆಯನ್ನ ಅಪಖ್ಯಾತಿಗೊಳಿಸಲು ಮಾಡುತ್ತಿರುವ ಸಂಚು ಇದು ಎಂದಿದ್ದಾರೆ.

- Advertisement -
spot_img

Latest News

error: Content is protected !!