- Advertisement -
- Advertisement -
ಬೆಳ್ತಂಗಡಿ; ಉಜಿರೆಯ ದಿಶಾ ಬೇಕರಿ ಮುಂಭಾಗ ನಿಲ್ಲಿಸಿದ್ದ ಬೈಕ್ ಕಳವಾಗಿರುವ ಘಟನೆ ನಡೆದಿದೆ.
ಉಜಿರೆ ಗ್ರಾಮ ಬೆಳ್ತಂಗಡಿ ನಿವಾಸಿ ರಾಜು ಎಂಬವರು ಫೆಬ್ರವರಿ 29 ರಂದು ರಾತ್ರಿ ತನ್ನ ಕೆಎ-19-ಹೆಚ್ ಪಿ-0606 ನೇ ನಂಬ್ರದ ಹೊಂಡಾ ಯೂನಿಕಾರ್ನ್ ಬೈಕ್ ನ್ನು ಬೆಳ್ತಂಗಡಿ ಉಜಿರೆ ಗ್ರಾಮದ ದಿಶಾ ಬೇಕರಿಯ ಮುಂಭಾಗ ನಿಲ್ಲಿಸಿ ಹೋಗಿದ್ದರು.ಸುಮಾರು ಒಂದು ಗಂಟೆಯ ಬಳಿಕ ಬಂದು ಅದೇ ಜಾಗದಲ್ಲಿ ನೋಡಿದಾಗ ಬೈಕ್ ಕಾಣೆಯಾಗಿತ್ತು.
ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಡಿದಾಗ ಪತ್ತೆಯಾಗಿಲ್ಲ. ಬಳಿಕ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
- Advertisement -