- Advertisement -
- Advertisement -
ಉಡುಪಿ: ಎಷ್ಟೋ ಬಾರಿ ಹೆತ್ತವರ ನಿರ್ಲಕ್ಷ್ಯದಿಂದಾನೋ ಇಲ್ಲಾ ಹೆತ್ತವರ ಕಣ್ತಪ್ಪಿಸಿ ಮಕ್ಕಳು ಮಾಡುವ ತಪ್ಪುಗಳಿಂದಾನೋ ಅನಾಹುತಗಳು ನಡೆಯುತ್ತವೆ. ಇದೇ ರೀತಿ ಅಪ್ರಾಪ್ತ ಬಾಲಕನೊಬ್ಬ ಬೈಕ್ ಚಲಾಯಿಸಿ ಪ್ರಾಣ ಕಳೆದುಕೊಂಡಿದ್ದಾನೆ.
15 ವರ್ಷದ ಅರಾನ್ ಎಂಬ ಬಾಲಕ ಅತೀ ವೇಗದಿಂದ ಬೈಕ್ ಚಲಾಯಿಸಿ ರಸ್ತೆ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಶಿರೂರು ಕರಿಕಟ್ಟೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಸ್ಥಳಕ್ಕೆ ಬೈಂದೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
- Advertisement -