- Advertisement -
- Advertisement -
ಬೆಳಗಾವಿ: ಗೃಹ ಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಬಂದಿಲ್ಲ ಅಂತಾ ತಲೆಕೆಡಿಸಿಕೊಂಡಿರುವ ಗೃಹಿಣಿಯರಿಗೆ ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಕ್ಳರ್ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ಯೋಜನೆಯ ಮೂರು ತಿಂಗಳ ಹಣವನ್ನು ಒಂದೇ ಬಾರಿ ಜಮಾ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಚಿವೆ ಲಕ್ಷ್ಮಿ ಹೆಬಾಳ್ಕರ್, ತಾಂತ್ರಿಕ ಸಮಸ್ಯೆಯಿಂದಾಗಿ ಹಣ ಬರಲು ಸಾಧ್ಯವಾಗುತ್ತಿಲ್ಲ, ಇದಲ್ಲದೇ ಬ್ಯಾಂಕ್ ಸಮಸ್ಯೆ ಕೂಡ ತಲೆ ದೂರಿದ್ದು ಈ ನಿಟ್ಟಿನಲ್ಲಿ ಬ್ಯಾಂಕ್ ಮುಖ್ಯಸ್ಥರೊಂದಿಗೆ ಮಾತನಾಡಲಾಗುತ್ತಿದೆ.
ಇನ್ನೂ ಬೆಂಗಳೂರಿನಲ್ಲಿ ಪ್ರತಿ ದಿನ ಎರಡು ಮೂರು ಜಿಲ್ಲೆಗಳ ಸಿಡಿಪಿಓಗಳ ಜೊತೆಗೆ ಸಭೆ ನಡೆಸಲಾಗುತ್ತಿದೆ. ಈ ನಡುವೆ ಪ್ರತಿ ತಿಂಗಳು 15-20 ನೇ ತಾರೀಖಿನ ಒಳಗೆ ಹಣವನ್ನು ಬಿಡುಗಡೆ ಮಾಡಲಾಗುವುದು ಅಂತ ತಿಳಿಸಿದರು. ಇನ್ನೂ ಫಲಾನುಭವಿಗಳು ಯಾವುದೇ ಕಾರಣಕ್ಕೂ ಗೊಂದಲಕ್ಕೆ ಈಡಾಗಬೇಡಿ, ಈ ಬಗ್ಗೆ ಎಲ್ಲಾ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲಾಗುವುದು ಎಂದಿದ್ದಾರೆ.
- Advertisement -