ಮಂಗಳೂರು; ನಿಲ್ಲಿಸಿದ್ದ ಸಿಮೆಂಟ್ ತುಂಬಿದ ಲಾರಿ ಹಿಂದಕ್ಕೆ ಚಲಿಸಿದ ಪರಿಣಾಮ ನಾಲ್ಕು ಕಾರು , ಒಂದು ಬೈಕ್ ಜಖಂ ಆಗಿರುವ ಘಟನೆ ಸುರತ್ಕಲ್ ನಲ್ಲಿ ಇಂದು ಸಂಜೆ ನಡೆದಿದೆ.
ಇಲ್ಲಿನ ಪೆಟ್ರೋಲ್ ಬಂಕ್ ರಸ್ತೆ ಬಳಿ ನಿಲ್ಲಿಸಿದ್ದ ಸಿಮೆಂಟ್ ತುಂಬಿದ ಲಾರಿಯೊಂದು ಆಕಸ್ಮಿಕವಾಗಿ ಹಿಂದಕ್ಕೆ .ಘಟನೆ ಸಂಜೆ ಐದೂವರೆ ವೇಳೆ ಈ ಘಟನೆ ಸಂಭವಿಸಿದ್ದು, ಚಾಲಕ ಲಾರಿಯನ್ನು ನಿಲ್ಲಿಸಿ ಹೊರಗೆ ತೆರಳಿದ್ದ .ಈ ವೇಳೆ ಏಕಾಏಕಿ ಹಿಂದಕ್ಕೆ ಚಲಿಸಿದ ಲೋಡ್ ಲಾರಿ ಇಲ್ಲಿನ ಡಿವೈಡರ್ ಬಳಿ ತಿರುವು ತೆಗೆದು ಕೊಂಡು ಬಂದಿದೆ.ಇದರಿಂದ ಮಾರ್ಕೆಟ್ ಅಂಗಡಿಗೆ ಬಂದಿದ್ದ ಗ್ರಾಹಕರ ನಾಲ್ಕು ಕಾರುಗಳಿಗೆ ಗುದ್ದಿತಲ್ಲದೆ ಎಳೆದುಕೊಂಡು ಮತ್ತಷ್ಟು ಚಲಿಸಿ, ಬಳಿಕ ಅಂಗಡಿಯ ಗೋಡೆಗೆ ತಾಗಿ ನಿಂತಿದೆ.
ನೇರವಾಗಿ ಚಲಿಸಿದ್ದರೆ ಸಮೀಪದ ಬಸ್ ತಂಗುದಾಣದಲ್ಲಿದ್ದ ಬಸ್, ಪ್ರಯಾಣಿಕರಿಗೆ ಢಿಕ್ಕಿ ಹೊಡೆಯುವ ಸಂಭವವಿತ್ತು. ಇತ್ತ ಮಾರ್ಕೆಟ್ ಬಳಿಯೂ ಸಾಕಷ್ಟು ಜನವಿದ್ದು,ದೂರದಿಂದಲೇ ಲಾರಿ ಹಿಮ್ಮುಖವಾಗಿ ಚಲಿಸುವುದನ್ನು ಕಂಡು ಬದಿಗೆ ಸರಿದು ಅಪಾಯದಿಂದ ಪಾರಾಗಿದ್ದಾರೆ.