Tuesday, May 14, 2024
Homeತಾಜಾ ಸುದ್ದಿರಾಜ್ಯದಲ್ಲಿ ಮುಂದುವರೆದ ಪಠ್ಯಪುಸ್ತಕ ವಿವಾದ:‌ ಶಿಕ್ಷಣ ಇಲಾಖೆಯಿಂದ ಬಿಗ್‌ ಪ್ಲ್ಯಾನ್

ರಾಜ್ಯದಲ್ಲಿ ಮುಂದುವರೆದ ಪಠ್ಯಪುಸ್ತಕ ವಿವಾದ:‌ ಶಿಕ್ಷಣ ಇಲಾಖೆಯಿಂದ ಬಿಗ್‌ ಪ್ಲ್ಯಾನ್

spot_img
- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಪಠ್ಯಪುಸ್ತಕ ಪರಿಷ್ಕರಣೆ ಗುದ್ದಾಟ ಶುರುವಾಗಿದ್ದು, ಪಠ್ಯಪುಸ್ತಕ ವಿರೋಧಿಸುವವರಿಗೆ ಕೌಂಟರ್ ನೀಡಲು ಶಿಕ್ಷಣ ಇಲಾಖೆ ಪ್ಲಾನ್ ಸಿದ್ಧಪಡಿಸಿದೆ ಎನ್ನಲಾಗಿದೆ.

ಹಿಂದಿನ ಬರಗೂರು ರಾಮಚಂದ್ರಪ್ಪ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯು ಮಾಡಿದ್ದ ಎಡವಟ್ಟುಗಳನ್ನು ಪಟ್ಟಿ ಮಾಡಿ ಶಿಕ್ಷಣ ಇಲಾಖೆ ಬುಕ್ ಲೆಟ್ ಸಿದ್ಧಪಡಿಸಿದ್ದು, ಅದನ್ನು ಬಿಡುಗಡೆ ಮಾಡಿ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಸಮಿತಿಯ ಪಠ್ಯ ಪರಿಷ್ಕರಣೆ ವಿರೋಧಿಸಿದವರಿಗೆ ಕೌಂಟರ್ ನೀಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯಪುಸ್ತಕ ಸಮಿತಿಯ 150 ಕ್ಕೂ ಹೆಚ್ಚು ತಪ್ಪುಗಳನ್ನು ಪತ್ತೆ ಹಚ್ಚಿರುವ ಶಿಕ್ಷಣ ಇಲಾಖೆ. ಈ ತಪ್ಪುಗಳ ಬುಕ್ ಲೆಟ್ ಅನ್ನು ಇಂದು ಸಚಿವ ಆರ್. ಅಶೋಕ್ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!