
ಗುಜರಾತ್ : ಅಂತರಾಜ್ಯ ಮಟ್ಟದಲ್ಲ್ ಶಾಖೆಯನ್ನು ಹೊಂದಿರುವ ಭಾರತ್ ಬ್ಯಾಂಕ್ ಇದರ ಗುಜರಾತ್ ನಲ್ಲಿರುವ ಅಂಕಲೇಶ್ವರ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.

ಭಾರತ ಕೊ-ಆಪರೇಟಿವ್ ಬ್ಯಾಂಕ್ ಮುಂಬೈ ಲಿಮಿಟೆಡ್, ಇದರ ಅಂಕ್ಲೇಶ್ವರ ಶಾಖೆಯ ಪ್ರಭಂಧಕ ಆಶಿಷ್ ಆರ್. ಕೋಟ್ಯಾನ್ ಇವರ ನೇತೃತ್ವದಲ್ಲಿ ನಡೆದ ಬ್ಯಾಂಕಿನ ಸಂಸ್ಥಾಪನಾ ದಿನಾಚರಣೆಯ ಸಮಾರಂಭದಲ್ಲಿ ಪ್ರತೀನ್ ಹೋಟೆಲ್ ಅಂಕ್ಲೇಶ್ವರದ ಮ್ಯಾನೇಜರ್, ರಂಜಿತ್ ಶೆಟ್ಟಿ, ಪ್ರೈಮ್ ಕೊ-ಆಪರೇಟಿವ್ ಬ್ಯಾಂಕ್, ಭರುಚ್ ಮ್ಯಾನೇಜರ್, ಚಿರಾಗ್ ಪಟೇಲ್ , ಬ್ಯಾಂಕಿನ ಗ್ರಾಹಕ ಅನಿಲ್ ಜೋಶಿ, ಭ್ಯಾಂಕಿನ ಅಂಕಲೇಶ್ವರ ನಿವೇಷಣದ ಮಾಲಕ ಸಾಜಿದ್ ರಾವಾತ್, ಜಲಾರಾಮ್ ಎಂಜಿನಿಯರಿಂಗ್ನ ಮಾಲೀಕ ದೀಪಕ್ ಶೆಟ್ಟಿ, ಯಶ್ವಿ ಎಂಜಿನಿಯರಿಂಗ್ನ ಮಾಲೀಕ, ಚೇತನಾ ಶೆಟ್ಟಿ, ವಸಂತಿ ಆರ್. ಕೋಟ್ಯಾನ್, ಚಾಯಾ ಉಮೇಶ್ ಗಜ್ಜರ್, ಉಮೇಶ್ ಗಜ್ಜರ್ ಎನ್ಆರ್ಐ ಗ್ರಾಹಕ), ಬಿಲ್ಲವರ ಅಸೋಸಿಯೇಶನ್ ಗುಜರಾತ್ನ ಅಧ್ಯಕ್ಷ ಹಾಗೂ ತುಳು ಸಂಘ ಚಾರಿಟೇಬಲ್ ಟ್ರಸ್ಟ್ ಅಂಕ್ಲೇಶ್ವರದ ಉಪಾಧ್ಯಕ್ಷ ಹರಿಷ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದು ಭಾರತ್ ಬ್ಯಾಂಕ್ ನ ವ್ಯವಹಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಶುಭ ಕೋರಿದರು.


