- Advertisement -
- Advertisement -
ಬೆಳ್ತಂಗಡಿ: ತಾಲೂಕಿನ ಇಂದಬೆಟ್ಟುವಿನ ಕುತ್ರಬೆಟ್ಟು ಸಮೀಪ ಲಾಯಿಲದ ಒಬ್ಬರಿಗೆ ಹಾವು ಕಡಿದಿದ್ದು,ಈ ವಿಷಯ ಅರಿತ ಅಂಗನವಾಡಿ ಶಿಕ್ಷಕಿಯರಾದ ಶಶಿಕಲಾ ಮತ್ತು ಲೀಲಾವತಿಯವರು ತಕ್ಷಣ ಹಾವು ಕಡಿದ ವ್ಯಕ್ತಿಯ ನೋವಿಗೆ ಸ್ಪಂದಿಸಿ,ಆಸ್ಪತ್ರೆಗೆ ದಾಖಲಿಸಿ ಜೀವ ರಕ್ಷಕರಾಗಿ ಇತರರಿಗೆ ಮಾದರಿಯಾಗಿದ್ದಾರೆ,
ಶಶಿಕಲಾ ಕೊಯ್ಯನಗರ ಬೆದ್ರಬೆಟ್ಟು ಅಂಗನವಾಡಿ ಮತ್ತು ಲೀಲಾವತಿ ಕಲ್ಲಾಜೆ ಶಾಂತಿನಗರದ ಅಂಗನವಾಡಿ ಶಿಕ್ಷಕಿಯರಾಗಿದ್ದಾರೆ. ಇವರ ಸಾಮಾಜಿಕ ಬದ್ಧತೆ ಊರವರ ಅತಿ ಪ್ರಶಂಸೆಗೆ ಕಾರಣವಾಗಿದೆ.
- Advertisement -