- Advertisement -
- Advertisement -
ಮೈಸೂರು: ಮೈಸೂರು ಅರಮನೆಯಲ್ಲಿ ನಿನ್ನೆ ಜನಿಸಿರುವ ಆನೆಮರಿಗೆ ದತ್ತಾತ್ರೇಯ ಎಂದು ನಾಮಕರಣ ಮಾಡಲಾಗಿದೆ. ಪ್ರಮೋದಾದೇವಿ ಒಡೆಯರ್ ಇಂದು ಅರಮನೆಯಲ್ಲಿ ದತ್ತಾತ್ರೇಯ ಎಂದು ನಾಮಕರಣ ಮಾಡಿದ್ದಾರೆ.
ನಾಡಹಬ್ಬ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಲಕ್ಷ್ಮೀ ಆನೆ ನಿನ್ನೆ ಮರಿಗೆ ಜನ್ಮ ನೀಡಿತ್ತು. ದಸರಾ ಹಬ್ಬದಲ್ಲಿ ಪಾಲ್ಗೊಳ್ಳಲು ಲಕ್ಷ್ಮೀ ಆನೆ ಬಂಡೀಪುರದ ರಾಂಪುರ ಕ್ಯಾಂಪ್ ನಿಂದ ಆಗಮಿಸಿತ್ತು.
- Advertisement -