Wednesday, May 15, 2024
Homeಕರಾವಳಿಕರಾವಳಿಯ ಪಡಿತರ ಚೀಟಿದಾರರಿಗೆ ಕುಚ್ಚುಲಕ್ಕಿ ವಿತರಣೆಗೆ ಆದೇಶ ಹಿನ್ನೆಲೆ: ಸಿಎಂಗೆ ಭೇಟಿ ಮಾಡಿ ಅಭಿನಂದಿಸಿದ ನಳೀನ್...

ಕರಾವಳಿಯ ಪಡಿತರ ಚೀಟಿದಾರರಿಗೆ ಕುಚ್ಚುಲಕ್ಕಿ ವಿತರಣೆಗೆ ಆದೇಶ ಹಿನ್ನೆಲೆ: ಸಿಎಂಗೆ ಭೇಟಿ ಮಾಡಿ ಅಭಿನಂದಿಸಿದ ನಳೀನ್ ಕುಮಾರ್ ಕಟೀಲ್ ಮತ್ತು ಕೋಟ ಶ್ರೀನಿವಾಸ ಪೂಜಾರಿ

spot_img
- Advertisement -
- Advertisement -

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. ಕರಾವಳಿ ಜಿಲ್ಲೆಗಳ ಪಡಿತರ ಚೀಟಿದಾರರಿಗೆ ಬೆಳ್ತಿಗೆ ಅಕ್ಕಿಯ ಬದಲು ಉತ್ತಮ ಗುಣಮಟ್ಟದ ಸ್ಥಳೀಯವಾಗಿ ಖರೀದಿ ಮಾಡಿದ ಕುಚ್ಚಲಕ್ಕಿಯನ್ನು ವಿತರಣೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾನಾ ಉಪಸ್ಥಿತರಿದ್ದರು. ಬೆಂಗಳೂರಿನ ಆರ್.ಟಿ. ನಗರದಲ್ಲಿರುವ ಮುಖ್ಯಮಂತ್ರಿಗಳ ಖಾಸಗಿ ನಿವಾಸದಲ್ಲಿ ಇಂದು ಭೇಟಿ ನಡೆದಿದೆ.

- Advertisement -
spot_img

Latest News

error: Content is protected !!