- Advertisement -
- Advertisement -
ಮಂಡ್ಯ: ಬ್ರಾಹ್ಮಣ ಸಮುದಾಯದ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೀಡಿದ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಪೇಜಾವರ ಶ್ರೀಗಳು, ಬ್ರಾಹ್ಮಣರು ಭಾರತೀಯರಲ್ಲವೇ? ಅವರು ಸಿಎಂ ಆದ್ರೆ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಬ್ರಾಹ್ಮಣರು ಸಿಎಂ ಆಗಬಾರದು ಅಂತ ಏನೂ ಇಲ್ಲ. ಬ್ರಾಹ್ಮಣರ ಸಂಖ್ಯೆ ಕಡಿಮೆ ಇದೆ ಎಂಬ ಮಾತ್ರಕ್ಕೆ ಏನೇನೋ ಹೇಳಿಕೆ ನೀಡುವುದು ಸರಿಯಲ್ಲ. ಯಾವುದೇ ಹೇಳಿಕೆಗೆ ಹಿನ್ನೆಲೆ ಪುರಾವೆ ಇರಬೇಕು. ಯಾವ ಧರ್ಮಕ್ಕೂ ಅನ್ಯಾಯವಾಗಬಾರದು ಎಂದರು.
- Advertisement -