- Advertisement -
- Advertisement -
ಉಡುಪಿ: ಮಾಂಸದ ಅಂಗಡಿಗಳಲ್ಲಿ ಪ್ರಾಣಿವಧೆ ಮಾಡಿ ನೇತು ಹಾಕಬಾರದು. ಈ ಪದ್ಧತಿ ನಿಲ್ಲಬೇಕು. ಇದನ್ನ ನೋಡಿದ ಮಕ್ಕಳಲ್ಲಿ ಹಿಂಸಾತ್ಮಕ ಮನೋಭಾವನೆ ಮೂಡಲಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.
ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಕ್ಕಳಲ್ಲಿ ನೈತಿಕ ಮೌಲ್ಯ ಹೆಚ್ಚಿಸಬೇಕು. ಮಕ್ಕಳು ಭಾವೀ ಪ್ರಜೆಗಳು.ಅವರ ಮನಸ್ಸನ್ನು ಬಾಲ್ಯದಲ್ಲೇ ಹಿಂಸೆಯಿಂದ ದೂರ ಇರುವಂತೆ ನೋಡಿಕೊಳ್ಳಬೇಕು. ಮಾಧ್ಯಮಗಳಲ್ಲಿ ಬರುವ ಹಿಂಸೆಯಿಂದಲೂ ಅವರನ್ನು ದೂರ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
- Advertisement -