- Advertisement -
- Advertisement -
ಬೆಂಗಳೂರು: ಇಲ್ಲಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಅಪರಿಚಿತ ಮಹಿಳೆಯೋರ್ವಳು ನವಜಾತ ಶಿಶು ಕದ್ದು ಪರಾರಿಯಾಗಿರುವ ಘಟನೆ ವರದಿಯಾಗಿದೆ.ಈ ಕುರಿತಾಗಿ ಮಗುವಿನ ಪೋಷಕರು ವಿವಿ ಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಆರ್ಶಿಯಾ ಎಂಬವರಿಗೆ ನವೆಂಬರ್ 9 ರಂದು ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಡರಾತ್ರಿ ಅವರಿಗೆ ಹೆಣ್ಣು ಮಗು ಜನಿಸಿದ್ದು ಮಗುವಿನ ಹೊಟ್ಟೆಯಲ್ಲಿ ನೀರು ಸೇರಿಕೊಂಡಿದೆ ಎಂದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನವೆಂಬರ್ 11 ರಂದು ಆರ್ಶಿಯಾ ಅವರ ಪತಿ ಮಗುವನ್ನು ತೋರಿಸಲು ಕೇಳಿಕೊಂಡಿದ್ದಾರೆ.
ಈ ವೇಳೆ ನಿಮ್ಮ ಕಡೆಯವರು ಯಾರೋ ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ವೈದ್ಯರು, ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಆದರೆ, ಆರ್ಶಿಯಾ ಅವರ ಸಂಬಂಧಿಕರು ಮಗುವನ್ನು ಪಡೆದುಕೊಂಡಿಲ್ಲ. ಮೇಲ್ನೋಟಕ್ಕೆ ಅಪರಿಚಿತ ಮಹಿಳೆ ವಂಚಿಸಿ ಮಗು ಕದ್ದು ಪರಾರಿಯಾದಂತೆ ಕಂಡು ಬರುತ್ತಿದೆ.
- Advertisement -