- Advertisement -
- Advertisement -
ಬೆಂಗಳೂರು: ಸಿಸಿಬಿ ನೋಟಿಸ್ ನೀಡಿದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಕಿರಿಕ್ ಮಾಡುತ್ತಿರುವ ನಟಿ ಸಂಜನಾಗಲ್ರಾನಿ ಇದೀಗ ಜೈಲಿನಲ್ಲಿ ಮತ್ತೆ ಕ್ಯಾತೆ ತೆಗೆದಿದ್ದಾರೆ. ಸಂಜನಾ ಎರಡು ದಿನಗಳ ನ್ಯಾಯಾಂಗ ಬಂಧನ ಇಂದು ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ನಟಿ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರು. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ಸಂಜನಾ ಗಲ್ರಾನಿಗೆ ತನ್ನ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದಿರುವುದು ಸಿಕ್ಕಾಪಟ್ಟೆ ಟೆನ್ಷನ್ ತಂದಿದೆ.
ಈ ಹಿನ್ನಲೆಯಿಂದಾಗಿ ನಟಿ ನನಗೆ ಸಿಗರೇಟ್ ಕೋಡಿ ಎಂದು ಜೈಲು ಸಿಬ್ಬಂದಿ ಮುಂದೆ ರಂಪಾಟ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಟಿಯ ರಂಪಾಟದಿಂದ ಬೇಸತ್ತ ಜೈಲು ಸಿಬ್ಬಂದಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸದ್ಯ ಸಂಜನಾಳ ಮನವೊಲಿಸಲು ಜೈಲಿನ ಅಧಿಕಾರಿಗಳು ಕಷ್ಟ ಪಡುತ್ತಿದ್ದಾರೆ.
- Advertisement -