- Advertisement -
- Advertisement -
ಬೆಂಗಳೂರು: ಸ್ಯಾಂಡಲ್ ವುಡ್ ನ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ತಮ್ಮ ಪತಿಯ ಹುಟ್ಟುಹಬ್ಬವನ್ನುಇಂದು ಆಚರಿಸಿದ್ದಾರೆ. ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ನಟಿ ಆರ್ ಆರ್ ನಗರದ ಕೊರೊನಾ ವಾರಿಯರ್ ತಂಡದ ಸ್ನೇಹಿತರ ಜೊತೆ ಸೇರಿ ರೈತರೊಬ್ಬರಿಂದ ಕರುವನ್ನು ಕೊಂಡುಕೊಂಡಿದ್ದಾರೆ.
ಅಲ್ಲದೆ ಕರುವಿಗೆ ರಾಮ ಎಂದು ನಾಮಕರಣ ಮಾಡಿ, ಗೋಶಾಲೆಗೆ ದಾನ ನೀಡಿದ್ದಾರೆ. ಈ ಮೂಲಕ ಜಗದೀಶ್ ಜನ್ಮದಿನದ ಸಂಭ್ರಮವನ್ನು ಆಚರಿಸಿದ್ದಾರೆ. ಸಧ್ಯ ಈ ಆಚರಣೆ ಸುದ್ದಿಯಾಗಿದ್ದು ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
- Advertisement -