Friday, April 19, 2024
Homeತಾಜಾ ಸುದ್ದಿನೇಣುಬಿಗಿದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ - ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಪಾಸ್​ಬುಕ್​ ಮೇಲೇ ಡೆತ್​ನೋಟ್ ಬರೆದಿಟ್ಟ!..

ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ – ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಪಾಸ್​ಬುಕ್​ ಮೇಲೇ ಡೆತ್​ನೋಟ್ ಬರೆದಿಟ್ಟ!..

spot_img
- Advertisement -
- Advertisement -

ನವದೆಹಲಿ:ಇಲ್ಲಿನ ಆಜಾದ್ ಕಾಲನಿಯ ಬುದ್ಧ ವಿಹಾರ್ 2ನೇ ಹಂತದ ನಿವಾಸಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿ ಆಗಿದ್ದ ಸುಬೋಧ್​ (40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.ಈತನು ದೆಹಲಿ ರೋಹಿಣಿ ಏರಿಯಾದ ಟಿ ಪಾಯಿಂಟ್​ನ ಪಾರ್ಕ್​ನಲ್ಲಿನ ಮರಕ್ಕೆ ನೇಣು ಹಾಕಿಕೊಂಡು ಆತ್ಯಹತ್ಯೆ ಮಾಡಿಕೊಂಡಿದ್ದಾನೆ.

ಮೃತಪಟ್ಟ ಈ ವ್ಯಕ್ತಿಯ ಕಿಸೆಯಲ್ಲಿ ಬ್ಯಾಂಕ್​ ಪಾಸ್​ಬುಕ್​ ಹಾಗೂ ಪೆನ್ ಪತ್ತೆಯಾಗಿದೆ. ಆತ ಪಾಸ್​ಬುಕ್​ ಮೇಲೇ ಡೆತ್​ನೋಟ್ ಬರೆದಿಟ್ಟು ನೇಣು ಹಾಕಿಕೊಂಡಿದ್ದು ತನ್ನ ಡೆತ್​ನೋಟ್​ನಲ್ಲಿ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ತನ್ನ ಕೊನೆಯ ಆಸೆಯನ್ನು ಆತ ಸೋದರ ಮಾವನಲ್ಲಿ ಕೋರಿಕೊಂಡಿದ್ದಾನೆ.ದೆಹಲಿ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

- Advertisement -
spot_img

Latest News

error: Content is protected !!