- Advertisement -
- Advertisement -
ಉಡುಪಿ: ಚರ್ಚ್ ನಲ್ಲಿ ಪ್ರಾರ್ಥನೆಗೆ ಹೋಗುತ್ತಿದ್ದ ವೇಳೆ ಕುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಹೆಬ್ರಿಯ ಬೆಳ್ಳಿ ಗ್ರಾಮದ ಗುಮ್ಮಹೊಲದ ಸಂತ ಜೊಸೇಪರ ಚರ್ಚ್ ನ ಧರ್ಮಗುರು ಅಲೆಕ್ಸಾಂಡರ್ ಲೂಯಿಸ್ ಸೇರಿದಂತೆ ಮೂವರ ವಿರುದ್ಧ ಶಂಕರ ನಾರಾಯಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಳ್ಳೆಯ ಗುಮ್ಮಹೊಲ ಗ್ರಾಮದ ಶಾಂತಿ ಡೇಸಾ ಎಂಬುವವರೇ ದೂರು ನೀಡಿದವರು. ಚರ್ಚ್ ನ ಧರ್ಮ ಗುರು ಅಲೆಕ್ಸಾಂಡರ್ ಲೂಯಿಸ್ ರವರು ಭಕ್ತರೊಂದಿಗೆ ಯಾವಾಗಲೂ ವಿನಾಕಾರಣ ಜಗಳ ಮಾಡುತ್ತಿದ್ದು, ಈ ಕಾರಣದಿಂದ ಇವರ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಸೆ.18 ರಂದು ಶಾಂತಿ ಡೇಸಾ ಪ್ರಾರ್ಥನೆ ಮಾಡಲು ಚಚ್ರ್ಗೆ ಹೋದಾಗ ಧರ್ಮಗುರುಗಳ ಸಲಹೆಯಂತೆ ಇಬ್ಬರು ಹಲ್ಲೆ ಮಾಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
- Advertisement -