Sunday, May 19, 2024
Homeತಾಜಾ ಸುದ್ದಿಮದುವೆ ನಂತರ ಸ್ನೇಹಿತ ನಮ್ಮಿಂದ ದೂರವಾಗ್ತಾನೆ ಅನ್ನೋ ಸಂದೇಹ; ಸ್ನೇಹಿತನ ಪತ್ನಿಯಿಂದ ಬಾಂಡ್ ಬರೆಸಿಕೊಂಡ ಕಿಲಾಡಿ...

ಮದುವೆ ನಂತರ ಸ್ನೇಹಿತ ನಮ್ಮಿಂದ ದೂರವಾಗ್ತಾನೆ ಅನ್ನೋ ಸಂದೇಹ; ಸ್ನೇಹಿತನ ಪತ್ನಿಯಿಂದ ಬಾಂಡ್ ಬರೆಸಿಕೊಂಡ ಕಿಲಾಡಿ ಗೆಳೆಯರು.

spot_img
- Advertisement -
- Advertisement -

ತಮಿಳುನಾಡು; ಮದುವೆ ಆದ್ರೆ ಮುಗೀತು ಮರ್ರೆ ಇನ್ನು ಅವರ ಕೈಗೆ ಸಿಗಲ್ಲ ಅನ್ನೋ ಮಾತು ಹುಡುಗ ಮದುವೆ ಆಗೋ ಸಮಯದಲ್ಲಿ ಕೆಳೋದು ಸಾಮಾನ್ಯ. ಈ ರೀತಿ ಆಗ್ಬಾರ್ದು ಅನ್ನೋ ಕಾರಣಕ್ಕೆ ತಮಿಳುನಾಡಿನಲ್ಲಿ ಗೆಳಯರ ಬಳಗವೊಂದು ಸೂಪರ್ ಡೂಪರ್ ಪ್ಲ್ಯಾನ್ ಮಾಡಿದೆ.

ತಮಿಳುನಾಡಿನ ಮಧುರೈ ಜಿಲ್ಲೆಯ ಉಸಿಲಂಪಟ್ಟಿಯಲ್ಲಿ  ಇತ್ತೀಚೆಗೆ ನಡೆದ ವಿವಾಹ ಸಮಾರಂಭವೊಂದು ವಿಚಿತ್ರ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ ಕೀಳ ಪುದೂರಿನ ನಿವಾಸಿ ಹರಿಪ್ರಸಾದ್ ಹಾಗೂ ಪೂಜಾ ಆಗಷ್ಟೇ ಹಸೆಮಣೆ ಇನ್ನೇನು ವೇದಿಕೆಗೆ ಆಗಮಿಸಿದ್ದಾರೆ. ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಹರಿಪ್ರಸಾದ್, ಸ್ಥಳೀಯ ಸೂಪರ್ ಸ್ಟಾರ್ ಕ್ರಿಕೆಟ್ ಕ್ಲಬ್ ತಂಡದ ನಾಯಕರಾಗಿದ್ದಾರೆ.

ಹೀಗಾಗಿಯೇ ಹರಿಪ್ರಸಾದ್ ಮದುವೆಗೆ ಕ್ರಿಕೆಟ್​ ತಂಡದ ಸದಸ್ಯರು ಹಾಗೂ ಸ್ನೇಹಿತರು ಬಂದಿದ್ದರು. ವೇದಿಕೆ ಮೇಲೆ ಬಂಧು ಮಿತ್ರರು ನವದಂಪತಿಗೆ ಶುಭಾಶಯ ಕೋರುವ ಕಾರ್ಯದಲ್ಲಿ ನಿರತರಾಗಿದ್ದರೆ, ಕ್ಲಬ್‌ನ ಆಟಗಾರರು ವರನ ಸ್ನೇಹಿತರ ವಧು ಪೂಜಾ ಕೈಗೆ ಒಂದು ಬಾಂಡ್​ ಪೇಪರ್​ ನೀಡಿದ್ದಾರೆ. ಈ ವೇಳೆ ಪೂಜಾ ತನಗೆ ಏನೋ ಚೇಷ್ಟೆ ಮಾಡಲು ಹೊರಟಿದ್ದಾರೆ ಎಂದುಕೊಂಡಿದ್ದರು.

ಆದರೂ, ವರನ ಸ್ನೇಹಿತರು ಪಟ್ಟು ಬಿಡದೇ ಒಪ್ಪಂದ ಪತ್ರಕ್ಕೆ ಸಹಿ ಹಾಕುವಂತೆ ಪೂಜಾರನ್ನು ಒತ್ತಾಯಿಸಿದ್ದಾರೆ. ಅಂತೆಯೇ, ಪೂಜಾ ಸಹಿ ಹಾಕಿದ ಕೂಡಲೇ ವಾರಾಂತ್ಯದಲ್ಲಿ ಗಂಡನಿಗೆ ಕ್ರಿಕೆಟ್ ಆಡಲು ಅವಕಾಶ ನೀಡುವುದಾಗಿ ಕ್ರಿಕೆಟ್ ಕ್ಲಬ್‌ನೊಂದಿಗೆ ಐದು ಸಾಲಿನ ಒಪ್ಪಂದ ಮಾಡಿಕೊಂಡಿರುವುದು ಗೊತ್ತಾಗಿದೆ.

‘ನಾನು, ಶ್ರೀಮತಿ ಪೂಜಾ, ಸೂಪರ್ ಸ್ಟಾರ್ ತಂಡದ ನಾಯಕ ಮತ್ತು ನನ್ನ ಪತಿ ಹರಿಪ್ರಸಾದ್ ಅವರಿಗೆ ಇಂದಿನಿಂದ ಮುಂದಿನ ಎಲ್ಲ ಶನಿವಾರ ಮತ್ತು ಭಾನುವಾರದಂದು ಸೂಪರ್ ಸ್ಟಾರ್ ತಂಡಕ್ಕಾಗಿ ಕ್ರಿಕೆಟ್ ಆಡಲು ಅನುಮತಿ ನೀಡುತ್ತೇನೆ’ ಎಂದು 20 ರೂ.ಗಳ ಸ್ಟಾಂಪ್ ಪೇಪರ್​ನಲ್ಲಿ ಪೂಜಾ ಅವರಿಂದ ಹರಿಪ್ರಸಾದ್ ಸ್ನೇಹಿತರು ಸಹಿ ಮಾಡಿಸಿಕೊಂಡಿದ್ದಾರೆ. ಕೊನೆಗೆ ಇದ್ದನ್ನು ತಿಳಿದು ಪೂಜಾ ಒಂದು ಕ್ಷಣ ದಂಗಾಗಿ ಹೋಗಿದ್ದರು.

- Advertisement -
spot_img

Latest News

error: Content is protected !!