Friday, August 28, 2026
Homeತಾಜಾ ಸುದ್ದಿಮಾಣಿ: ತೂಫಾನ್ ಹಾಗೂ ಟ್ಯಾಂಕರ್ ನಡುವೆ ಢಿಕ್ಕಿ - ಚಾಲಕನ ಸ್ಥಿತಿ ಗಂಭೀರ

ಮಾಣಿ: ತೂಫಾನ್ ಹಾಗೂ ಟ್ಯಾಂಕರ್ ನಡುವೆ ಢಿಕ್ಕಿ – ಚಾಲಕನ ಸ್ಥಿತಿ ಗಂಭೀರ

- Advertisement -
- Advertisement -

ಮಾಣಿ: ತೂಫಾನ್ ಹಾಗೂ ಟ್ಯಾಂಕರ್‌ ನಡುವೆ ಮುಖಾ ಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ತೂಫಾನ್ ಚಾಲಕ ಗಂಭೀರ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಎಂಬಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.


ಬುಡೋಳಿ ಸಮೀಪದ ಐಡಿಯಲ್ ಕ್ಯಾಶ್ಯ ಸಂಸ್ಥೆಗೆ ಸೇರಿದ ತೂಫನಾ ಕಾರ್ಮಿಕರನ್ನು ಬಿಟ್ಟು ಹಿಂತಿರುಗುತ್ತಿದ್ದವೇಳೆ ಮಾಣಿ ದಾರುಲ್ ಇರ್ಶಾದ್ ಮಸೀದಿಯ ಬಳಿ ಟ್ಯಾಂಕರ್ ನಡುವೆ ಢಿಕ್ಕಿ ಸಂಭವಿಸಿದೆ.

ಘಟನೆಯಲ್ಲಿ ಟ್ಯಾಂಕರ್ ಚಾಲಕ ಸುರೇಂದ್ರ ಗಂಭೀರ ಗಾಯಗೊಂಡಿದ್ದು, ಮಾಣಿಯ ಇಲ್ವಾ ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!