- Advertisement -
- Advertisement -
ಬೆಂಗಳೂರು: ಇಲ್ಲಿನ ಹೆಬ್ಬಾಳದಲ್ಲಿ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಹೊಸ ಸಂಚಾರ ನಿಯಮ ಜಾರಿ ಮಾಡಲಾಗಿದೆ.
ಯಲಹಂಕ, ಕೊಡಿಗೆಹಳ್ಳಿ, ಕೆಂಪಾಪುರ, ಜಕ್ಕೂರುಗಳಿಂದ ನಗರಕ್ಕೆ ಪ್ರವೇಶಿಸುವ ವಾಹನಗಳಿಗೆ ನೇರವಾಗಿ ಹೆಬ್ಬಾಳ ಮೇಲೇತುವೆಗೆ ಸಂಪರ್ಕ ಕಲ್ಪಿಸದೇ ಇರಲು ತೀರ್ಮಾನಿಸಲಾಗಿದೆ.
ಯಲಹಂಕ, ಕೊಡಿಗೆಹಳ್ಳಿ, ಕೆಂಪಾಪುರ, ಜಕ್ಕೂರು ಪ್ರದೇಶಗಳಿಂದ ನಗರಕ್ಕೆ ಪ್ರವೇಶಿಸಬೇಕಾದಲ್ಲಿ ವಾಹನ ಸವಾರರು ಹೆಬ್ಬಾಳ ವೃತ್ತದ ಬಳಿ ಲೂಪ್ ರ್ಯಾಂಪ್ ಮೂಲಕ ಹಾದು ನಗರಕ್ಕೆ ಪ್ರವೇಶಿಸಬೇಕಾಗುತ್ತದೆ. ಎಲಿವೇಟೆಡ್ ಕಾರಿಡಾರ್ ಮೇಲೆ ನಗರ ನಿಲ್ದಾಣದೆಡೆಗೆ ಬರುವ ಬಸ್ ಗಳು ಲೂಪ್ ರ್ಯಾಂಪ್ ಗಿಂತಲೂ ಮುನ್ನ ನಿಗದಿತ ಬಸ್ ಬೇ ಬಳಿ ನಿಲುಗಡೆಗೆ ಕ್ರಮ ಕೈಗೊಳ್ಳಲಾಗಿದೆ.
ಏರ್ಪೋರ್ಟ್ ಹೆದ್ದಾರಿಯಿಂದ ಬರುವ ವಾಹನಗಳ ಸಂಚಾರ ನಿಯಮದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಈ ಹಿಂದಿನಂತೆಯೇ ಅವುಗಳು ಹೆಬ್ಬಾಳ ಮೇಲೇತುವೆಯ
- Advertisement -