- Advertisement -
- Advertisement -
ಕೊಡಗು: ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದ್ದು ಕೆಲವು ಕಡೆ ಗುಡ್ಡ ಕುಸಿತ ಸಂಭವಿಸುತ್ತಿದೆ. ಇದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ಕೊಡಗಿನ ಮದೆನಾಡು ಸಮೀಪದ ಕರರ್ತೋಜಿ ಬಳಿ ಭಾರಿ ಗಾತ್ರದ ಮಣ್ಣು ರಸ್ತೆಗೆ ಕುಸಿತವಾಗಿದೆ. ರಾಷ್ಟ್ರೀಯ ಹೆದ್ದಾರಿ 275 ರ ಬಳಿ ಘಟನೆ ನಡೆದಿದೆ. ಇದರಿಂದಾಗಿ ರಸ್ತೆಯ ಒಂದು ಬದಿಯಲ್ಲಿ ವಾಹನಗಳು ಸಂಚರಿಸುವಂತಾಗಿದೆ. ಇದೇ ರೀತಿ ಮಣ್ಣು ಕುಸಿತ ಮುಂದುವರೆದರೆ ಸಂಚಾರ ಬಂದ್ ಆಗುವ ಸಾಧ್ಯತೆಯಿದೆ.
- Advertisement -