- Advertisement -
- Advertisement -
ಉಡುಪಿ: ಮಣಿಪಾಲ ಸಮೀಪದ ಪರ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ 169 ‘ಎ’ ತುಂಬೆಲ್ಲ ಹೊಂಡ-ಗುಂಡಿಗಳು ಬಿದ್ದಿದ್ದು, ರಸ್ತೆ ಅವ್ಯವಸ್ಥೆಯ ಬಗ್ಗೆ ಯಕ್ಷಗಾನ ಕಲಾವಿದರೊಬ್ಬರು ಹಾಡಿರುವ ಯಕ್ಷ ಗೀತೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸವಾರರು ವಾಹನ ಚಲಾಯಿಸುವಾಗ ಅನುಭವಿಸುವ ಸಂಕಟವನ್ನು ಇದರಲ್ಲಿ ವಿವರಿಸಲಾಗಿದೆ. ಪ್ರಾಸಬದ್ಧವಾಗಿ ರಸ್ತೆಯ ದುರಾವಸ್ಥೆಯನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದ್ದು, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವನ್ನು ವ್ಯಂಗ್ಯ ಭರಿತವಾಗಿ ಟೀಕಿಸಲಾಗಿದೆ.ಈ ಗೀತೆಯನ್ನು ವಾಟ್ಸ್ ಅಪ್ ಫೇಸ್ಬುಕ್ ಗಳಲ್ಲಿ ನೋಡಿ ಜನರು ಖುಷಿ ಪಡುತ್ತಿದ್ದಾರೆ.
ಪ್ರಾಸಬದ್ಧವಾಗಿ ರಸ್ತೆಯ ದುಸ್ಥಿತಿಯನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದ್ದು, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವನ್ನು ವ್ಯಂಗ್ಯಭರಿತವಾಗಿ ಟೀಕಿಸಲಾಗಿದೆ.
- Advertisement -