- Advertisement -
- Advertisement -
ಶಿವಮೊಗ್ಗ: ತಾನೂ ಅನಕ್ಷರಸ್ಥನಾಗಿದ್ದರೂ ಹೆಂಡತಿಯನ್ನ ಚೆನ್ನಾಗಿ ಓದಿಸಿ ಕೆಎಎಸ್ ಅಧಿಕಾರಿ ಮಾಡಲು ಶ್ರಮ ವಹಿಸಿದ್ದ ವ್ಯಕ್ತಿ ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ.
ಶಿವಮೊಗ್ಗದ ಸವಾರ್ ಲೈನ್ ರಸ್ತೆಯ ಸೀನಾ ಅಲಿಯಾಸ್ ಕಡ್ಡಿ ಸೀನಾ ಮೃತ ದುರ್ದೈವಿ.
ಕಡ್ಡಿ ಸೀನಾ ತನ್ನ ಅಕ್ಕನ ಮಗಳು ಅಶ್ವಿನಿಯನ್ನು ಮದುವೆಯಾಗಿದ್ದ. ಆತ ಓದಿರಲಿಲ್ಲ ಅದಕ್ಕಾಗಿ ಹೆಂಡತಿಯಾದರೂ ಓದಿ ಕೆಎಎಸ್ ಅಧಿಕಾರಿ ಆಗಲಿ ಎಂದು ಬಯಸಿದ್ದರು. ಹೀಗಾಗಿ ಹೆಂಡತಿಗೆ ಕೆಎಎಸ್ ಪೂರ್ವಭಾವಿ ತರಬೇತಿ ಕೊಡಿಸಿದ್ದರು.
ಅದರಂತೆ ಅವರ ಹೆಂಡತಿ ಅಶ್ವಿನಿ 2020 ರಲ್ಲಿ ಕೆಎಎಸ್ ಪಾಸ್ ಮಾಡಿ ಆರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ತಹಸೀಲ್ದಾರ್ ಹುದ್ದೆಗೇರಿದರು. ಆದರೆ ತನ್ನ ಕನಸು ಈಡೇರುತ್ತಿದ್ದಂತೆ ಸೀನಾ ರನ್ನು ಮಹಾಮಾರಿ ಕೋವಿಡ್ ಬಲಿ ಪಡೆದಿದೆ.
- Advertisement -