Sunday, June 7, 2026
Homeತಾಜಾ ಸುದ್ದಿರೈತರ ಪ್ರತಿಭಟನೆ ಹೆಸರಲ್ಲಿ ನಡೆಯಿತೇ ದೇಶದ್ರೋಹ?ನಿಷೇಧಿತ ಸಂಘಟನೆ ಸಿಖ್ ಫಾರ್ ಜಸ್ಟೀಸ್ ಮಾಡಿದ್ದೇನು?

ರೈತರ ಪ್ರತಿಭಟನೆ ಹೆಸರಲ್ಲಿ ನಡೆಯಿತೇ ದೇಶದ್ರೋಹ?ನಿಷೇಧಿತ ಸಂಘಟನೆ ಸಿಖ್ ಫಾರ್ ಜಸ್ಟೀಸ್ ಮಾಡಿದ್ದೇನು?

- Advertisement -
- Advertisement -

ನವದೆಹಲಿ: ಇಂದಿನ ಪ್ರತಿಭಟನೆ ವೇಳೆ ದೆಹಲಿಯ ಕೆಂಪು ಕೋಟೆ ಮೇಲೆ ಪ್ರತ್ಯೇಕ ಖಲಿಸ್ತಾನಿ ರಾಜ್ಯಕ್ಕೆ ಬೇಡಿಕೆ ಇಟ್ಟಿದ್ದ ನಿಷೇಧಿತ ಸಂಘಟನೆ ಸಿಖ್ ಫಾರ್ ಜಸ್ಟೀಸ್ ಬಾವುಟ ಹರಿಸಿದೆ. ಈ ವೇಳೆ ಪಂಜಾಬ್ ರೈತನಿಗೆ ಬಹುಮಾನ ಘೋಷಿಸಿದ್ದು, ಇದರಲ್ಲಿ ಖಲಿಸ್ತಾನಿಗಳ ಕೈವಾಡವಿದೆ ಎಂದು ಕೇಂದ್ರ ವರದಿ ಮಾಡಿದೆ.

ಕೃಷಿ ಕಾಯ್ದೆಗಳ ವಿರುದ್ಧ ರೈತರು ಗಣರಾಜ್ಯೋತ್ಸವದ ದಿನದಂದು ನಗರಕ್ಕೆ ಪ್ರವೇಶ ಪಡೆಯುವ ಸಂದರ್ಭ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಗಲಭೆ ಏರ್ಪಟ್ಟಿದೆ. ಗಲಭೆಯೊಂದಿಗೇ ದೆಹಲಿಯ ಕೆಂಪು ಕೋಟೆ ತಲುಪಿದ ರೈತರು ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ್ದಾರೆ.

ಕೆಂಪು ಕೋಟೆಯಲ್ಲಿ ಖಲಿಸ್ತಾನಿ ಧ್ವಜ ಹಾರಿಸಿದ್ದಕ್ಕೆ 2,50,000 ಡಾಲರ್ ಬಹುಮಾನ ಘೋಷಿಸಿರುವುದಾಗಿ ತಿಳಿದುಬಂದಿದೆ. ಈ ಅಂಶ ಮುಂದಿಟ್ಟುಕೊಂಡು ಕೇಂದ್ರ ಪ್ರತಿಭಟನೆಯಲ್ಲಿ ಪ್ರತ್ಯೇಕತಾವಾದಿಗಳ ಕೈವಾಡವನ್ನು ವ್ಯಕ್ತಪಡಿಸಿದೆ.ಇದು ದೇಶದ್ರೋಹ ಎಂಬ ಕೂಗು ದೇಶದಾದ್ಯಂತ ಕೇಳಿಬರುತ್ತಿದೆ.

- Advertisement -

Latest News

error: Content is protected !!