- Advertisement -
- Advertisement -
ಬೆಳ್ತಂಗಡಿ: ಇಲ್ಲಿನ ಉಜಿರೆ ಜನಾರ್ದನ ದೇವಸ್ಥಾನದ ಬಳಿ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗೆ ತಂಡವೊಂದು ಹಲ್ಲೆ ನಡೆಸಿ, ಸಮವಸ್ತ್ರ ಹರಿದ ಘಟನೆ ವರದಿಯಾಗಿದೆ.
ಪಿಸಿ ವೆಂಕಟೇಶ್ ಸಿ.ಬಿ ಅವರು ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮೂವರನ್ನು ಬಂಧಿಸಲಾಗಿದೆ.ಉಜಿರೆ ನಿವಾಸಿಗಳಾದ ಸಾಬು, ಮಂಜುನಾಥ, ಕಿರಣ ಮತ್ತು ನವೀನ್ ಹಲ್ಲೆ ನಡೆಸಿದವರೆಂದು ತಿಳಿದುಬಂದಿದ್ದು ಆರೋಪಿತರು ಪೊಲೀಸರನ್ನು ಮತ್ತು ಸಮವಸ್ತ್ರ ವನ್ನು ನಿಂದಿಸಿ ಪೊಲೀಸರ ಕಾಲರ್ ಹಿಡಿದೆಳೆದು ಹರಿದು ರಾದ್ಧಾಂತ ಮಾಡಿದ್ದರು.
- Advertisement -