- Advertisement -
- Advertisement -
ಉಡುಪಿ: ಉಡುಪಿ ಕೃಷ್ಣಮಠದಲ್ಲಿ ಗೋವು ಪೂಜೆ ನಡೆಸುವ ಮೂಲಕ ಗ್ರಾಮ ಸ್ವರಾಜ್ ಸಮಾವೇಶಕ್ಕೆ ಚಾಲನೆ ನೀಡಲಾಯ್ತು. ಈ ವೇಳೆ ಹಸುವೊಂದು ನಳಿನ್ ಕುಮಾರ್ ಕಟೀಲ್ ಕೈ ಬೆರಳಿಗೆ ಕಚ್ಚಿದ ಘಟನೆ ನಡೆದಿದೆ.
ಮಠದ ಗೋಶಾಲೆಗೆ ತೆರಳಿದ ಬಿಜೆಪಿ ನಾಯಕರು ಗೋವುಗಳಿಗೆ ಪೂಜೆ ಸಲ್ಲಿಸಿದರು . ಈ ವೇಳೆ ಗೋವಿಗೆ ನಳಿನ್ ಕುಮಾರ್ ಕಟೀಲ್ ಬಾಳೆಹಣ್ಣು ತಿನ್ನಿಸುವಾಗ ಅವರ ಕೈಯನ್ನು ಹಸು ಕಚ್ಚಿದ ಘಟನೆ ನಡೆಯಿತು. ಒಮ್ಮೆ ನೋವಾದರೂ ನಗುತ್ತ ಮುಂದಕ್ಕೆ ಸಾಗಿದ ಕಟೀಲ್ ಹತ್ತಾರು ಗೋವುಗಳಿಗೆ ಹಣ್ಣು ನೀಡಿದರು. ಕುಂದಾಪುರದಲ್ಲಿ ಮತ್ತು ಉಡುಪಿಯಲ್ಲಿ ಇಂದು ಎರಡು ಸಮಾವೇಶಗಳು ನಡೆಯಲಿದೆ.
- Advertisement -