Tuesday, April 30, 2024
Homeಕರಾವಳಿಉಡುಪಿಕೃಷ್ಣಮಠದಲ್ಲಿ ಗೋ ಪೂಜೆ ವೇಳೆ ನಳಿನ್ ಕುಮಾರ್ ಕಟೀಲ್ ಬೆರಳಿಗೆ ಕಚ್ಚಿದ ಹಸು

ಕೃಷ್ಣಮಠದಲ್ಲಿ ಗೋ ಪೂಜೆ ವೇಳೆ ನಳಿನ್ ಕುಮಾರ್ ಕಟೀಲ್ ಬೆರಳಿಗೆ ಕಚ್ಚಿದ ಹಸು

spot_img
- Advertisement -
- Advertisement -

ಉಡುಪಿ: ಉಡುಪಿ ಕೃಷ್ಣಮಠದಲ್ಲಿ ಗೋವು ಪೂಜೆ ನಡೆಸುವ ಮೂಲಕ ಗ್ರಾಮ ಸ್ವರಾಜ್ ಸಮಾವೇಶಕ್ಕೆ ಚಾಲನೆ ನೀಡಲಾಯ್ತು. ಈ ವೇಳೆ  ಹಸುವೊಂದು ನಳಿನ್ ಕುಮಾರ್ ಕಟೀಲ್ ಕೈ ಬೆರಳಿಗೆ ಕಚ್ಚಿದ ಘಟನೆ ನಡೆದಿದೆ.

ಮಠದ ಗೋಶಾಲೆಗೆ ತೆರಳಿದ ಬಿಜೆಪಿ ನಾಯಕರು ಗೋವುಗಳಿಗೆ ಪೂಜೆ ಸಲ್ಲಿಸಿದರು . ಈ ವೇಳೆ ಗೋವಿಗೆ ನಳಿನ್ ಕುಮಾರ್ ಕಟೀಲ್ ಬಾಳೆಹಣ್ಣು ತಿನ್ನಿಸುವಾಗ ಅವರ ಕೈಯನ್ನು ಹಸು ಕಚ್ಚಿದ ಘಟನೆ ನಡೆಯಿತು. ಒಮ್ಮೆ ನೋವಾದರೂ ನಗುತ್ತ ಮುಂದಕ್ಕೆ ಸಾಗಿದ ಕಟೀಲ್ ಹತ್ತಾರು ಗೋವುಗಳಿಗೆ ಹಣ್ಣು ನೀಡಿದರು. ಕುಂದಾಪುರದಲ್ಲಿ ಮತ್ತು ಉಡುಪಿಯಲ್ಲಿ ಇಂದು ಎರಡು ಸಮಾವೇಶಗಳು ನಡೆಯಲಿದೆ.

- Advertisement -
spot_img

Latest News

error: Content is protected !!