- Advertisement -
- Advertisement -
ನವದೆಹಲಿ:ಇಲ್ಲಿನ ಆಜಾದ್ ಕಾಲನಿಯ ಬುದ್ಧ ವಿಹಾರ್ 2ನೇ ಹಂತದ ನಿವಾಸಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿ ಆಗಿದ್ದ ಸುಬೋಧ್ (40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.ಈತನು ದೆಹಲಿ ರೋಹಿಣಿ ಏರಿಯಾದ ಟಿ ಪಾಯಿಂಟ್ನ ಪಾರ್ಕ್ನಲ್ಲಿನ ಮರಕ್ಕೆ ನೇಣು ಹಾಕಿಕೊಂಡು ಆತ್ಯಹತ್ಯೆ ಮಾಡಿಕೊಂಡಿದ್ದಾನೆ.
ಮೃತಪಟ್ಟ ಈ ವ್ಯಕ್ತಿಯ ಕಿಸೆಯಲ್ಲಿ ಬ್ಯಾಂಕ್ ಪಾಸ್ಬುಕ್ ಹಾಗೂ ಪೆನ್ ಪತ್ತೆಯಾಗಿದೆ. ಆತ ಪಾಸ್ಬುಕ್ ಮೇಲೇ ಡೆತ್ನೋಟ್ ಬರೆದಿಟ್ಟು ನೇಣು ಹಾಕಿಕೊಂಡಿದ್ದು ತನ್ನ ಡೆತ್ನೋಟ್ನಲ್ಲಿ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ತನ್ನ ಕೊನೆಯ ಆಸೆಯನ್ನು ಆತ ಸೋದರ ಮಾವನಲ್ಲಿ ಕೋರಿಕೊಂಡಿದ್ದಾನೆ.ದೆಹಲಿ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
- Advertisement -