- Advertisement -
![]()
- Advertisement -
ಬೆಳ್ತಂಗಡಿ: ಅಲ್ಪಸಂಖ್ಯಾತ ಇಲಾಖೆಯಿಂದ ಬೆಳ್ತಂಗಡಿ ತಾಲೂಕಿನ 4 ಮಸೀದಿ, ಮದರಸಗಳ ದುರಸ್ತಿ ಕಾಮಗಾರಿಗೆ 70ಲಕ್ಷ ಅನುದಾನ ಸರ್ಕಾರ ಮಂಜೂರು ಮಾಡಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಹೇಳಿದ್ದಾರೆ.
ತಾಲೂಕಿನ ಉರುವಾಲುಪದವು ಗ್ರಾಮದ,ಬಾಖಿಯಾತುಸ್ಮಾಲಿಹಾತ್ ಜುಮ್ಮಾ ಮಸೀದಿ ಇದರ ದುರಸ್ಥಿ ಕಾಮಗಾರಿ.20.ಲಕ್ಷ ಧರ್ಮಸ್ಥಳ ಗ್ರಾಮದ ಕನ್ಯಾಡಿ ಮಸ್ಕಿದ್ ಮತ್ತು ಹಯಾತುಲ್ ಇಸ್ಲಾಂ ಮದರಸ ಕಟ್ಟಡದ ದುರಸ್ತಿ ಮತ್ತು ನವೀಕರಣಕ್ಕಾಗಿ 10ಲಕ್ಷ ಹಾಗೂ ಮುಂಡಾಜೆ ಗ್ರಾಮದ ಸೋಮಂತಡ್ಕ ಬದ್ರಿಯ ಮಸೀದಿಯ ದುರಸ್ಥಿ ಮತ್ತು ನವೀಕರಣಕ್ಕಾಗಿ 20ಲಕ್ಷ, ಉಜಿರೆ ಗ್ರಾಮದ ಮಾಚಾರು ಎಂಬಲ್ಲಿ ಮುಯಿದ್ದೀನ್ ಜುಮ್ಮಾ ಮಸೀದಿ ಇದರ ದುರಸ್ತಿ ಮತ್ತು ನವೀಕರಣಕ್ಕಾಗಿ 20ಲಕ್ಷ ರೂಪಾಯಿ ಸರ್ಕಾರ ಮಂಜೂರು ಮಾಡಿದೆ ಎಂದಿದ್ದಾರೆ.
- Advertisement -


