- Advertisement -
![]()
- Advertisement -
ಬೆಳ್ತಂಗಡಿ : ಬುರುಡೆ ಪ್ರಕರಣ ಸಂಬಂಧ ಹೋರಾಟಗಾರ ಜಯಂತ್.ಟಿ ಎಸ್.ಐ.ಟಿ ವಿಚಾರಣೆಗೆ ಸೆ.4 ರಂದು ಸಂಜೆ 5:20 ಕ್ಕೆ ಬ್ಯಾಗ್ ಜೊತೆ ಹಾಜರಾಗಿದ್ದು. ಅಧಿಕಾರಿಗಳು ಮಧ್ಯರಾತ್ರಿ 2:30 ರವರೆಗೆ ವಿಚಾರಣೆ ಮಾಡಿ ಸೆ.5 ರಂದು ಬೆಳಗ್ಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿ ವಾಪಸ್ ಕಳುಹಿಸಿದ್ದಾರೆ.
ಮತ್ತೊಂದೆಡೆ ಬುರುಡೆ ಪ್ರಕರಣ ಮತ್ತು ಸುಜಾತ ಭಟ್ ಪ್ರಕರಣ ಸಂಬಂಧ ವಿಡಿಯೋ ಮಾಡಿ ಪ್ರಸಾರ ಮಾಡಿದ್ದ ಯೂಟ್ಯೂಬರ್ ಅಭಿಷೇಕ್ ಸೆ.3 ರಂದು ಎಸ್.ಐ.ಟಿ ವಿಚಾರಣೆಗೆ ಹೋಗಿ ಮುಂದುವರಿದ ಭಾಗವಾಗಿ ಸೆ.4 ರಂದು ಕೂಡ ರಾತ್ರಿ ಪೂರ್ತಿ ವಿಚಾರಣೆ ಮುಂದುವರಿದಿದ್ದು ಎಸ್.ಐ.ಟಿ ವಶದಲ್ಲಿದ್ದಾನೆ. ಈತನಿಗೆ ಸೆ.5 ರಂದು ಕೂಡ ವಿಚಾರಣೆ ಮುಂದವರಿಸಲಿದ್ದಾರೆ ಅಧಿಕಾರಿಗಳು.
- Advertisement -


