Friday, June 27, 2025
Homeಕರಾವಳಿಬೆಳ್ತಂಗಡಿ: ಅವ್ಯವಹಾರಗಳ ತಾಣವಾಗಿದ್ದ ಕಳಿಯ ಗ್ರಾ. ಪಂ., ಎಸಿಬಿ ಪೊಲೀಸರಿಂದ ದಾಳಿ

ಬೆಳ್ತಂಗಡಿ: ಅವ್ಯವಹಾರಗಳ ತಾಣವಾಗಿದ್ದ ಕಳಿಯ ಗ್ರಾ. ಪಂ., ಎಸಿಬಿ ಪೊಲೀಸರಿಂದ ದಾಳಿ

spot_img
- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಗೇರುಕಟ್ಟೆಯ ಕಳಿಯ ಗ್ರಾಮ ಪಂಚಾಯತ್ ನಲ್ಲಿ ಎಗ್ಗಿಲ್ಲದೆ ಸಾಗುತ್ತಿದ್ದ ಭ್ರಷ್ಟಾಚಾರದ ಕುರಿತು ದೂರಿನನ್ವಯ ಇನ್ಸ್‌ಪೆಕ್ಟರ್ ಯೊಗೀಶ್ ಕುಮಾರ್ ಬಿ.ಸಿ ನೇತೃತ್ವದ ಭ್ರಷ್ಟಾಚಾರ ನಿಗ್ರಹ ದಳದ ಪೋಲೀಸರ ತಂಡ ದಾಳಿ ನಡೆಸಿ ಕಡತ, ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಗ್ರಾಮ ಲೆಕ್ಕಿಗ (ವಿಎ) ರವಿ, ಪಿಡಿಒ, ಗ್ರಾಮ ಪಂಚಾಯತ್ ಅಧ್ಯಕ್ಷರು ಸೇರಿ ಒಂದು ಕುಟುಂಬಕ್ಕೆ ಎರಡು,ಮೂರು 94C ಹಕ್ಕು ಪತ್ರ ವಿತರಿಸಿದ್ದು, ಮತ್ತು ಜಾಗದಲ್ಲಿ ಯಾವುದೇ ರೀತಿಯ ಮನೆ ಇಲ್ಲದಿದ್ದರೂ ಅವರಿಗೆ 94C ಹಕ್ಕು ಪತ್ರ ವಿತರಿಸಿರುವ ಗುರುತರ ಆರೋಪದ ಕುರಿತು ಸಾರ್ವಜನಿಕರು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರಿಗೆ ದೂರು ನೀಡಿದ್ದರು.

ಇಂದು ಬೆಳ್ಳಂ ಬೆಳಗ್ಗೆ ಇನ್ಸ್‌ಪೆಕ್ಟರ್ ಯೋಗೀಶ್ ಕುಮಾರ್ ಮತ್ತು ಶ್ಯಾಮ್ ಸುಂದರ್ , ಹರಿ ಪ್ರಸಾದ್, ಪ್ರಶಾಂತ್ ಒಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!