- Advertisement -
- Advertisement -
ಚಿಕ್ಕಮಗಳೂರು: ಬಣಕಲ್ ನ ಬಿ.ಹೊಸಳ್ಳಿಗೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ 5 ಲೀಟರ್ ಸಾರಾಯಿ, ನೂರು ಲೀಟರ್ ಬೆಲ್ಲದ ಕೊಳೆ ಹಾಗೂ ಪರಿಕರಗಳನ್ನು ವಶ ಪಡಿಸಿ ಕೊಳ್ಳಲಾಗಿದೆ. ಆರೋಪಿ ಪರಾರಿಯಾಗಿ ತಲೆಮರೆಸಿಕೊಂಡಿದ್ದಾರೆ.
ಬಣಕಲ್ ಬಿ.ಹೊಸಳ್ಳಿಯ ಸುಂದರೇಶ್ ಆಲಿಯಾಸ್ ಮರಿ ಬಿನ್ ರಾಮೇಗೌಡ ಎಂಬುವವರ ತೋಟದ ಮೇಲೆ ಅಬಕಾರಿ ನಿರೀಕ್ಷಕ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ಈ ಸಮಯದಲ್ಲಿ ಆರೋಪಿ ಪರಾರಿಯಾಗಿದ್ದಾರೆ.ಕಾರ್ಯಾಚರಣೆಯಲ್ಲಿ ಅಬಕಾರಿ ಸಿಬ್ಬಂದಿಯಾದ ಸುರೇಶ್ ಕೆ,ಮಹಮ್ಮದ್ ಅಲಾವುದ್ದೀನ್ ಖಾನ್ ,ವಾಹನ ಚಾಲಕ ಅನೂಪ್ ಮತ್ತಿತರರು ಭಾಗವಹಿಸಿದ್ದರು.ಈ ಬಗ್ಗೆ ಪ್ರಕರಣ ದಾಖಲಾಗಿದೆ.
- Advertisement -