Saturday, May 4, 2024
Homeತಾಜಾ ಸುದ್ದಿರವಿ ಚನ್ನಣ್ಣನವರ್ ಸೇರಿದಂತೆ 9 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ಸರ್ಕಾರ

ರವಿ ಚನ್ನಣ್ಣನವರ್ ಸೇರಿದಂತೆ 9 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ಸರ್ಕಾರ

spot_img
- Advertisement -
- Advertisement -

ಬೆಂಗಳೂರು:ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಗುರುವಾರ ಆದೇಶಿಸಿದೆ.

ಅಪರಾಧಿ ತನಿಖಾ ದಳದ ಎಸ್​ಪಿ ಆಗಿದ್ದ ರವಿ ಡಿ ಚನ್ನಣ್ಣನವರ್ ಕರ್ನಾಟಕ ವಾಲ್ಮೀಕಿ ಅಭಿವೃದ್ದಿ ನಿಗಮದ ಎಂಡಿ ಆಗಿ ನೇಮಕ ಮಾಡಿ ವರ್ಗಾವಣೆ ಮಾಡಲಾಗಿದೆ.

ಎಸಿಬಿ ಎಸ್​ಪಿಯಾಗಿದ್ದ ಅಬ್ದುಲ್​ ಅಹ್ಮದ್​ ಅವರನ್ನು ಕೆಎಸ್​ಆರ್​ಟಿಸಿ (ಭದ್ರತೆ ಮತ್ತು ವಿಚಕ್ಷಣ) ನಿರ್ದೇಶಕರಾಗಿ, ಕೊಪ್ಪಳ ಎಸ್​ಪಿ ಆಗಿರುವ ಶ್ರೀಧರ್ ಅವರನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್​ಪಿ ಆಗಿ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ಜೈಲು ಎಸ್​ಪಿ ಆಗಿದ್ದ ಶಿವಕುಮಾರ ಅವರನ್ನು ಚಾಮರಾಜನಗರ ನೂತನ ಎಸ್​ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಚಾಮರಾಜನಗರ ಎಸ್ಪಿ ಆಗಿರುವ ದಿವ್ಯಾ ಸಾರಾ ಥಾಮಸ್​ ಅವರನ್ನು ಮೈಸೂರಿನ ಕರ್ನಾಟಕ ಪೊಲೀಸ್​ ಅಕಾಡೆಮಿ ಡೆಪ್ಯೂಟಿ ಡೈರೆಕ್ಟರ್​ ಆಗಿ ನೇಮಕ ಮಾಡಲಾಗಿದೆ.

ದೆಕ್ಕ ಕಿಶೋರ್​ ಬಾಬು ಅವರನ್ನು ಬೀದರ್​ ಎಸ್​ಪಿಯಾಗಿ, ಮೈಸೂರು ಎಸಿಬಿ ಎಸ್ಪಿ ಆಗಿರುವ ಅರುಣಂಗ್ಶು ಗಿರಿ ಅವರನ್ನು ಕೊಪ್ಪಳ ಎಸ್ಪಿಯಾಗಿ ನೇಮಕ ಮಾಡಲಾಗಿದೆ.

- Advertisement -
spot_img

Latest News

error: Content is protected !!