Monday, April 29, 2024
Homeತಾಜಾ ಸುದ್ದಿಗಡಿಯಲ್ಲಿ ನುಸುಳಲು ಯತ್ನಿಸಿದ 3 ಪಾಕ್ ಉಗ್ರರ ಹತ್ಯೆಗೈದ ಭಾರತೀಯ ಸೇನೆ.. 4 ಯೋಧರಿಗೆ ಗಾಯ

ಗಡಿಯಲ್ಲಿ ನುಸುಳಲು ಯತ್ನಿಸಿದ 3 ಪಾಕ್ ಉಗ್ರರ ಹತ್ಯೆಗೈದ ಭಾರತೀಯ ಸೇನೆ.. 4 ಯೋಧರಿಗೆ ಗಾಯ

spot_img
- Advertisement -
- Advertisement -

ಜಮ್ಮು ಕಾಶ್ಮೀರ: ಕಣಿವೆನಾಡು ಜಮ್ಮು ಕಾಶ್ಮೀರದ ಅಖ್ನೂರ್‌ನ ಖೌರ್ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಗಡಿ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನ ಮೂಲದ 3 ಉಗ್ರರನ್ನು ಭಾರತೀಯ ಯೋಧರು ಹತ್ಯೆಗೈದಿದ್ದಾರೆ.

ಪಾಕಿಸ್ತಾನ ಸೇನಾಪಡೆಯವರು ಉಗ್ರರನ್ನು ಭಾರತದ ಭೂ ಪ್ರದೇಶದತ್ತ ಓಡಿಸುವುದಕ್ಕಾಗಿ ಖೌರ್ ಸೆಕ್ಟರ್‌ನ ಜೋಗ್ಮಾ ಎಂಬ ಹಳ್ಳಿಯ ಮೇಲೆ ಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘನೆ ಮಾಡಿದೆ. ಈ ದಾಳಿಯಲ್ಲಿ ನಾಲ್ವರು ಭಾರತೀಯ ಸೈನಿಕರು ಗಾಯಗೊಂಡರು. ಇದಕ್ಕೆ ಪ್ರತಿಕಾರವಾಗಿ ಭಾರತೀಯ ಸೈನಿಕರು, ಗಡಿ ನಿಯಂತ್ರಣ ರೇಖೆಯಿಂದ ಒಳ ನುಸುಳುತ್ತಿದ್ದ ಮೂವರು ಶಸ್ತ್ರಸಜ್ಜಿತ ಉಗ್ರರನ್ನು ಗುಂಡು ಹಾರಿಸಿ ಹತ್ಯೆ ಮಾಡಿದರು ಎಂದು ಮೂಲಗಳು ತಿಳಿಸಿವೆ.

ಇನ್ನು ಈ ಘಟನೆಯಲ್ಲಿ ಗಾಯಗೊಂಡ ನಾಲ್ವರು ಸೈನಿಕರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಡಿ ನಿಯಂತ್ರಣ ರೇಖೆ ಬಳಿ ಹತ್ಯೆ ಮಾಡಲಾಗಿರುವ ಮೂವರು ಉಗ್ರರ ಮೃತದೇಹಗಳು ಗಡಿ ಬಳಿಯೇ ಇದ್ದೂ, ಈ ವರೆಗೂ ಮೃತದೇಹಗಳನ್ನು ಪಾಕಿಸ್ತಾನ ಪಡೆಗಳು ವಶಕ್ಕೆ ಪಡೆದಿಲ್ಲ ಎಂದು ಹೇಳಲಾಗುತ್ತಿದೆ.

‘ಈ ಉಗ್ರಗಾಮಿಗಳು, ಜೈಷ್‌ ಎ- ಮೊಹಮ್ಮದ್ (ಜೆಇಎಂ) ಸಂಘಟನೆಯಿಂದ ತರಬೇತಿ ಪಡೆದವರಾಗಿದ್ದು, ಅವರು ಸುಂದರ್‌ಬನಿ ಸುತ್ತಮುತ್ತಲಿನ ಪ್ರದೇಶದ ಮೂಲಕ ಪಿರ್‌ ಪಂಜಾಲ್‌ ಪರ್ವತಗಳನ್ನು ದಾಟಿ ದಕ್ಷಿಣ ಕಾಶ್ಮೀರವನ್ನು ತಲುಪುವ ಉದ್ದೇಶದಿಂದ ಒಳನುಸುಳಲು ಪ್ರಯತ್ನಿಸುತ್ತಿರಬಹುದು. ಜತೆಗೆ ಗಣರಾಜ್ಯೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮವನ್ನೂ ಭಂಗಗಳಿಸುವ ಉದ್ದೇಶ ಹೊಂದಿರಬಹುದು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!