- Advertisement -
- Advertisement -
ಕೇರಳ: ಇಲ್ಲಿನ ಪಾಲಕ್ಕಾಡ್ ಜಿಲ್ಲೆಯಲ್ಲಿ ಏಪ್ರಿಲ್ 15 ರಂದು ನಡೆದ ಎಸ್ ಡಿ ಪಿ ಐ ಮುಖಂಡನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರ್ಎಸ್ಎಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಮೇಶ್, ಆರುಮುಗನ್ ಮತ್ತು ಸರವಣನ್ ಎಂಬ ಮೂವರು ಬಂಧಿತ ಆರೋಪಿಗಳು. 2021 ರ ನವೆಂಬರ್ ನಲ್ಲಿ ಆರ್ಎಸ್ಎಸ್ ನಾಯಕ ಸಂಜಿತ್ ಅವರ ಸಾವಿಗೆ ಸೇಡು ತೀರಿಸಿಕೊಳ್ಳಲು ಎಸ್ ಡಿ ಪಿ ಐ ನಾಯಕ ಸುಬೈರ್ (43) ಅವರನ್ನು ನೇರವಾಗಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರಲ್ಲಿ ಒಬ್ಬನಾದ ರಮೇಶ್, ಸಂಜಿತ್ ನ ಅತ್ಯಂತ ಆಪ್ತ ಸ್ನೇಹಿತನಾಗಿದ್ದ. ಸಂಜಿತ್ ಹತ್ಯೆಯ ನಂತರ, ರಮೇಶ್ ಸುಬೈರ್ ಕೊಲೆಗೆ ಯೋಜನೆ ರೂಪಿಸಿದ್ದರು. ಈ ಮೂವರು ಒಂದೆರಡು ಬಾರಿ ಸುಬೈರ್ ನನ್ನು ಕೊಲ್ಲಲು ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ.
ಏಪ್ರಿಲ್ 15 ರಂದು ಪೂರ್ವಸಿದ್ಧತೆ ಮಾಡಿಕೊಂಡು ಸುಬೈರ್ ನನ್ನು ಆರೋಪಿಗಳು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
- Advertisement -