- Advertisement -
- Advertisement -
ಕಾಸರಗೋಡು :ಮಲಗಿದ್ದ ತಾಯಿಯ ತಲೆಗೆ ಕಡಿಯುವ ಕಲ್ಲು ಎತ್ತಿ ಹಾಕಿ ಮಗ ಕೊಲೆಗೆ ಯತ್ನಿಸಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಮಲಗಿದ್ದ ತಾಯಿಯ ತಲೆಗೆ ಕಡಿಯುವ ಕಲ್ಲು ಹಾಕಿ, ಹೆರೆಮಣೆಯಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೈಯ್ಯೂರು ಐಟಿಐ ವಿದ್ಯಾರ್ಥಿ ಸುಜಿತ್ (17) ನೇಣಿಗೆ ಶರಣಾದ ವಿದ್ಯಾರ್ಥಿ.
ಹೊಸದುರ್ಗ ಮಡಿಕೈಯ ಸುಧಾ (37) ಪತಿ ಮೃತಪಟ್ಟ ಬಳಿಕ ಮಗನನ್ನು ಕಲಿಯಲು ಅಲ್ಲದೆ ಇತರ ಎಲ್ಲಿಗೂ ಹೋಗಲು ಬಿಡುತ್ತಿರಲಿಲ್ಲ. ಇದರಿಂದಾಗಿ ಮನ ನೊಂದ ಆತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಗಾಯಾಳು ಸುಧಾ ಅವರನ್ನು ಪರಿಯಾರಂ ಆಸ್ಪತ್ರೆಗೆ ಸೇರಿಸಲಾಗಿದೆ.
- Advertisement -