ವಿಟ್ಲ; ಯುವತಿಯೊಬ್ಬಳು ವಿವಾಹಿತ ಯುವಕನೊಂದಿಗೆ ಪರಾರಿಯಾಗಿರುವ ಹಿನ್ನೆಲೆ ವಿಟ್ಲ ಪೊಲೀಸ್ ಠಾಣೆಗೆ ಯುವತಿಯ ಸಹೋದರ ದೂರು ನೀಡಿದ್ದಾರೆ.
ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಬಸಬೆಟ್ಟು ಎಂಬಲ್ಲಿರುವ ತನ್ನ ಮನೆಯಿಂದ ಯುವತಿ ಪುತ್ತೂರಿನ ಮುಕ್ವೆ ನಿವಾಸಿ ಪ್ರಸ್ತುತ ವಿಟ್ಲದ ನೆಲ್ಲಿಗುಡ್ಡೆಯಲ್ಲಿರುವ ಮಂತ್ರವಾದಿ ಸಿದ್ಧಿಕ್ ಮುಕ್ವೆ ಎಂಬಾತನ ಜೊತೆ ತೆರಳಿದ್ದಾಳೆ ಎಂದು ಸಹೋದರ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಈ ಹಿಂದೆ ಸಿದ್ದಿಕ್ ಯುವತಿಯನ್ನು ಮದುವೆ ಮಾಡಿಕೊಡಬೇಕಾಗಿ ವಿಚಾರಿಸಿದ್ದ. ಆದರೆ ಮನೆಯವರು ಒಪ್ಪಿರಲಿಲ್ಲ. ಆದುದರಿಂದ ಸಿದ್ದಿಕ್ ಮುಕ್ವೆ ಜೊತೆಯಲ್ಲಿ ಯುವತಿ ಹೋಗಿರುವ ಸಂಶಯ ವ್ಯಕ್ತವಾಗಿದೆ.
ಸಿದ್ದೀಕ್ ಎಂಬಾತನಿಗೆ ಈಗಾಗಲೇ ವಿವಾಹವಾಗಿದ್ದು, ಪತ್ನಿ ಜತೆ ಜೀವನ ನಡೆಸುತ್ತಿದ್ದಾನೆ. ಇದೀಗ ಯುವತಿಯನ್ನು ಮದುವೆಯಾಗಲು ಕೇರಳ ಕಡೆಗೆ ಹೋಗಿರಬಹುದೆಂದು ಸ್ಥಳೀಯರು ಸಂದೇಹ ವ್ಯಕ್ತಪಡಿಸಿದ್ದಾರೆ. ಯುವತಿಯ ಬಗ್ಗೆ ಸಂಬಂಧಿಕರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಿದಾಗ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಕಾಣೆಯಾದ ಯುವತಿಯನ್ನು ಪತ್ತೆ ಮಾಡಿ ಕೊಡಬೇಕಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಅ.ಕ್ರ 123/2022 ರಂತೆ ಪ್ರಕರಣ ದಾಖಲಾಗಿದೆ.